Advertisement

ವಾಸವೇ ಇಲ್ಲದವರ ಹೆಸರು ಮತದಾರ ಪಟ್ಟಿಯಲ್ಲೇಕೆ ?

08:22 PM Feb 04, 2021 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್ಚುನಾವಣಾ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸಚಿವ ಆರ್‌. ಶಂಕರ್‌, ವಿಧಾನ ಪರಿಷತ್ಸದಸ್ಯ ಚಿದಾನಂದ ಗೌಡರ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ಸದಸ್ಯರು, ಮುಖಂಡರು ಪಾಲಿಕೆ ಆಯುಕ್ತರ ಕಚೇರಿ ಎದುರು ಬುಧವಾರ ದಿಢೀರ್ಪ್ರತಿಭಟನೆ ನಡೆಸಿದರು.

Advertisement

ದಾವಣಗೆರೆಯಲ್ಲಿ ವಾಸ ಮಾಡದೇ ಇರುವಂತಹ ಸಚಿವ ಆರ್‌. ಶಂಕರ್‌, ವಿಧಾನ ಪರಿಷತ್ಸದಸ್ಯ ಚಿದಾನಂದ ಗೌಡ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರ ಪಡೆಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ್ಮನವಿಗೂ ಸ್ಪಂದಿಸದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ . ನಾಗರಾಜ್‌, ಬಾರಿಯ ಮೇಯರ್‌, ಉಪ  ಮೇಯರ್ಚುನಾವಣೆಯ ಮತದಾರರ ಪಟ್ಟಿಗಾಗಿ . 17 ರಂದು ಮನವಿ ಸಲ್ಲಿಸಲಾಗಿತ್ತು ಮತ್ತು ಕಳೆದ ಬಾರಿ ಮತದಾನ ಮಾಡಿದ್ದ 11 ಜನ ವಿಧಾನ ಪರಿಷತ್ಸದಸ್ಯರ ಹೆಸರು ರದ್ದುಪಡಿಸಬೇಕು ಎಂದು ಕೋರಲಾಗಿತ್ತು. ಸಂಬಂಧಿತ ಬಿಎಲ್ಒಗಳು ಹೆಸರು  ರದ್ದತಿಗೆ ಶಿಫಾರಸು ಮಾಡಿದ ನಂತರವೂ ರದ್ದು ಮಾಡಿಲ್ಲ. ಈಗಾಗಲೇ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮತದಾರರ ಪಟ್ಟಿ ಕಳುಹಿಸಿಕೊಡಲಾಗಿದೆ. ಪಟ್ಟಿ ನೀಡಲು ಆಯುಕ್ತರು ಒಳಗೊಂಡಂತೆ ಸಂಬಂಧಿತ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.

ಬಾರಿ ಸಚಿವ ಆರ್‌. ಶಂಕರ್‌, ವಿಧಾನ ಪರಿಷತ್ಸದಸ್ಯ ಚಿದಾನಂದ ಗೌಡರ ಹೆಸರು ಸೇರಿಸಲಾಗಿದೆ. ಎರಡು ತಿಂಗಳ ಹಿಂದೆ  ನಡೆದ ರಾಣೆಬೆನ್ನೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡಿರುವ ಶಂಕರ್ಅವರ ಹೆಸರು ಸೇರ್ಪಡೆ  ಮಾಡಲಾಗಿದೆ.

ಆಲ್ಲದೆ ವಿಧಾನ ಪರಿಷತ್ಸದಸ್ಯ ಚಿದಾನಂದ ಗೌಡರ ಹೆಸರನ್ನು ಸಹ ಸೇರಿಸಲಾಗಿದೆ. ಕೂಡಲೇ ಹೆಸರು ರದ್ದುಪಡಿಸಬೇಕು.  ಇಲ್ಲದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಫೆ. 18 ರಂದು ಮೇಯರ್‌, ಉಪ ಮೇಯರ್ಚುನಾವಣೆ ನಡೆಯಲಿದ್ದು, ಸಚಿವ ಆರ್‌. ಶಂಕರ್ಹೆಸರನ್ನು ಜಯನಗರದ 149ನೇ ಭಾಗ, ಚಿದಾನಂದ ಗೌಡರ ಹೆಸರನ್ನು  ವಿದ್ಯಾನಗರದ 248 ಭಾಗದಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್ಒಳಗೊಂಡಂತೆ ಎಲ್ಲಾ 11 ಜನ ವಿಧಾನ ಪರಿಷತ್ಸದಸ್ಯರ ಹೆಸರು ರದ್ದುಪಡಿಸುವಂತೆ  ಮನವಿ ಮಾಡಲಾಗಿದೆ. ಎಂದು ತಿಳಿಸಿದರು.

Advertisement

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ಮಾತನಾಡಿ,ಕಳೆದ ಬಾರಿ ಮೇಯರ್‌, ಉಪ ಮೇಯರ್ಚುನಾವಣೆಯಲ್ಲಿ ದಾವಣಗೆರೆಯಲ್ಲಿ ವಾಸ  ಇರದೇ ಇದ್ದಂತಹವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಈಗ ಸಚಿವ ಆರ್‌. ಶಂಕರ್‌, ವಿಧಾನ ಪರಿಷತ್ಸದಸ್ಯ ಬಿ. ಚಿದಾನಂದಗೌಡರ ಹೆಸರು ಸೇರಿಸಲಾಗಿದೆ. ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಂದು ಮತ ಚಲಾಯಿಸಿದರೂ ಅಚ್ಚರಿಪಡಬೇಕಿಲ್ಲ. ಟೂರಿಂಗ್ಟಾಕೀಸ್ನಂತೆ ಆಗಿದೆ ಎಂದು ಟೀಕಿಸಿದರು. ಆಕ್ರಮವಾಗಿ  ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ. ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುವ ಎಲ್ಲ ಸದಸ್ಯರ ಹೆಸರು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

 ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

ಸದಸ್ಯ ಕೆ. ಚಮನ್ಸಾಬ್ಮಾತನಾಡಿ, ವಿಧಾನ ಪರಿಷತ್ಸದಸ್ಯರೇ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಲಿ.  ಜನಪ್ರತಿನಿಧಿಗಳಾದರೂ ಯಾಕೆ ಬೇಕು ಎಂದು ಪ್ರಶ್ನಿಸಿದರು. ಸದಸ್ಯರಾದ ಜೆ.ಎನ್‌. ಶ್ರೀನಿವಾಸ್‌, ಜಿ.ಎಸ್‌. ಮಂಜುನಾಥ್‌,  ನಗರಸಭೆ ಮಾಜಿ ಅಧ್ಯಕ್ಷ ಆರ್‌.ಎಚ್‌. ನಾಗಭೂಷಣ್ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next