Advertisement

ಡಿ.23ಕ್ಕೆ ಉಡುಪಿಯಲ್ಲಿ ಗಿಟಾರ್‌ ಮಾಂತ್ರಿಕ ಆರ್‌.ಪ್ರಸನ್ನ ಮೋಡಿ 

11:12 AM Dec 16, 2018 | |

ಉಡುಪಿ: ಗಿಟಾರ್‌ನಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುವಲ್ಲಿ ಯುಗ ಪ್ರವರ್ತಕರೆನಿಸಿಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದ ಆರ್‌.ಪ್ರಸನ್ನ ಅವರು ಉಡುಪಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

Advertisement

ಡಿಸೆಂಬರ್‌ 23 ಕ್ಕೆ ಉಡುಪಿಯ ಉದ್ಯಾವರ ಬಳಿಯ ಬೈಲೂರಿನ ಹಸಿರುವನದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಸ್ಕೃತಿ ಸಿರಿ-21 ಕಾಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಆರ್‌.ಪ್ರಸನ್ನ ಅವರು ಸಹಕಲಾವಿದರೊಂದಿಗೆ ಮೋಡಿ ಮಾಡಲಿದ್ದಾರೆ.  

ಪ್ರಸನ್ನ ಅವರು ಕರ್ನಾಟಕ ಸಂಗೀತ ಮಾತ್ರವಲ್ಲದೆ ಜಾಝ್, ಪ್ರಗತಿಶೀಲ ರಾಕ್ ಸಂಗೀತ  ಮತ್ತು ಸಮ್ಮಿಳನ ಸಂಗೀತದ ಪ್ರಕಾರಗಳಲ್ಲಿ ನುಡಿಸುವ ಮತ್ತು ಸಂಯೋಜನೆ ಮಾಡುವಲ್ಲಿ ಪರಿಣಿತರಾಗಿದ್ದಾರೆ. 

ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಪ್ರಸನ್ನ ಅವರು 20ಕ್ಕೂ ಹೆಚ್ಚು ದೇಶಗಳಲ್ಲಿ ಕಾಯಕ್ರಮಗಳನ್ನು ನೀಡಿರುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next