Advertisement
ತೂಕ ಇಳಿಕೆವರದಿಗಳ ಪ್ರಕಾರ ಸಕ್ಕರೆಯನ್ನು ತ್ಯಜಿಸಿದರೆ ಗ್ಲೂಕೋಸ್ ಇಲ್ಲದಿರುವ ಕಾರಣ ದೇಹ ಕೊಬ್ಬಿನಿಂದ ಕೀಟೋನ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದು ಕೊಬ್ಬನ್ನು ಕರಗಿಸುವ ಲಕ್ಷಣ. ಒಂದು ವೇಳೆ ಕೀಟೋ ಜ್ವರ ಅಂದರೆ ತಲೆನೋವು, ವಿವರಿಸಲಾಗದ ಸುಸ್ತು ಹಾಗೂ ಸೆಳೆತಗಳಿಂದ ಕೂಡಿರುವ ಜ್ವರವನ್ನು ಹೊಂದಿದ್ದರೆ ಒಂದು ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೀಟೋದ ಅಡ್ಡಪರಿಣಾಮ ಹಾಗೂ ಈ ಡಯಟ್ ಸೂಕ್ತವೆ ಎಂಬುದನ್ನು ಪೌಷ್ಟಿಕತಜ್ಞರಲ್ಲಿ ಕೇಳಿ ಅನುಸರಿಸುವುದು ಉತ್ತಮ.
ಸಕ್ಕರೆಯನ್ನು ಸೇವಿಸಿದಾಗ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ. ಹೀಗಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಒಂದು ವೇಳೆ ಸಕ್ಕರೆಯನ್ನು ತ್ಯಜಿಸಿದಾಗ ಒಂದು ವಾರದಲ್ಲಿ ರಕ್ತದೊತ್ತಡ ಸ್ಥಿರವಾಗುತ್ತದೆ ಹಾಗೂ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.
ಮಧುಮೇಹ ನಿಯಂತ್ರಣ
ಎಲ್ಲ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸುವುದೆಂಬ ಚಿಂತೆ. ಸಕ್ಕರೆ ಪ್ರಮಾಣ ಕುಗ್ಗಿಸಿದಲ್ಲಿ ದೇಹದಲ್ಲಿನ ಇನ್ಸುಲಿನ್ ಉತ್ಪಾದನೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಸಕ್ಕರೆಯನ್ನು ಬಿಟ್ಟು ಆರೋಗ್ಯಕರ ಆಯ್ಕೆಯನ್ನು ಸೇರಿಸಿದಾಗ ದೇಹದಲ್ಲಿ ಕೊಬ್ಬು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಇನ್ಸುಲಿನ್ ಮಟ್ಟ ಆರೋಗ್ಯಕರವಾಗಿರುವುದು.
ಎಲ್ಲ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸುವುದೆಂಬ ಚಿಂತೆ. ಸಕ್ಕರೆ ಪ್ರಮಾಣ ಕುಗ್ಗಿಸಿದಲ್ಲಿ ದೇಹದಲ್ಲಿನ ಇನ್ಸುಲಿನ್ ಉತ್ಪಾದನೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಸಕ್ಕರೆಯನ್ನು ಬಿಟ್ಟು ಆರೋಗ್ಯಕರ ಆಯ್ಕೆಯನ್ನು ಸೇರಿಸಿದಾಗ ದೇಹದಲ್ಲಿ ಕೊಬ್ಬು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಇನ್ಸುಲಿನ್ ಮಟ್ಟ ಆರೋಗ್ಯಕರವಾಗಿರುವುದು.
ಹೊಳೆಯುವ ಚರ್ಮ
ಸಕ್ಕರೆ ಕೇವಲ ತೂಕ, ಮಧುಮೇಹ ಮತ್ತು ಇತರ ಜೀವನಶೈಲಿಯನ್ನು ಕೆಡಿಸುವುದು ಮಾತ್ರವಲ್ಲದೇ ಮೊಡವೆಗಳನ್ನು ಪ್ರಚೋದಿಸುತ್ತದೆ.ವಾಸ್ತವವಾಗಿ ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಡೆಸಿದ ಅಧ್ಯಯನವು ಸಕ್ಕರೆ ತುಂಬಿರುವ ಸೋಡಾ, ಸಾಫ್ಟ್ ಡ್ರಿಂಕ್ಸ್ಗಳನ್ನು ತ್ಯಜಿಸಿದ ಮಹಿಳೆಯರು ಉತ್ತಮ ಚರ್ಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸಕ್ಕರೆ ಕೇವಲ ತೂಕ, ಮಧುಮೇಹ ಮತ್ತು ಇತರ ಜೀವನಶೈಲಿಯನ್ನು ಕೆಡಿಸುವುದು ಮಾತ್ರವಲ್ಲದೇ ಮೊಡವೆಗಳನ್ನು ಪ್ರಚೋದಿಸುತ್ತದೆ.ವಾಸ್ತವವಾಗಿ ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಡೆಸಿದ ಅಧ್ಯಯನವು ಸಕ್ಕರೆ ತುಂಬಿರುವ ಸೋಡಾ, ಸಾಫ್ಟ್ ಡ್ರಿಂಕ್ಸ್ಗಳನ್ನು ತ್ಯಜಿಸಿದ ಮಹಿಳೆಯರು ಉತ್ತಮ ಚರ್ಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಉತ್ತಮ ಮನಸ್ಥಿತಿ
ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಅಧಿಕ ಸಕ್ಕರೆಯುಳ್ಳ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ಕಿರಿಕಿರಿ ಮತ್ತು ಆತಂಕಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ. ಸಕ್ಕರೆಯನ್ನು ತ್ಯಜಿಸಿದ್ದಲ್ಲಿ ಉತ್ತಮ ಮನಃಸ್ಥಿತಿ ಹೊಂದಲು ಸಾಧ್ಯ.