Advertisement

Quit India ಚಳವಳಿ ವರ್ಷಾಚರಣೆ

12:13 AM Aug 10, 2023 | Team Udayavani |

ಮಂಗಳೂರು: ಕ್ವಿಟ್‌ ಇಂಡಿಯಾ ಚಳವಳಿ ವರ್ಷಾಚರಣೆ ಅಂಗವಾಗಿ ಗೋವಾ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಟ್ಠಲ್‌ ಕಿಣಿ ಅವರನ್ನು ನಗರದ ಭೋಜರಾವ್‌ ಲೈನ್‌ನಲ್ಲಿರುವ ಅವರ ಸ್ವಗೃಹದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಮ್ಮಾನಿಸಿ ಗೌರವಿಸಿದರು.

Advertisement

ಜಿಲ್ಲಾಧಿಕಾರಿಯವರು ಕಿಣಿ ಅವರ ತ್ಯಾಗ, ಹೋರಾಟವನ್ನು ಶ್ಲಾಘಿಸಿದರು. ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಸ್ವಾರ್ಥವನ್ನು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ವಿಟ್ಠಲ ಕಿಣಿ ಅವರ ಮೂಲಕ ಅಂತಹ ಎಲ್ಲ ಹೋರಾಟಗಾರರ ಹೋರಾಟ, ತ್ಯಾಗದ ದರ್ಶನ ಮಾಡಿದ ಅನುಭವವಾಗುತ್ತದೆ. ವಿಟ್ಠಲ ಕಿಣಿ ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್‌ ವಿರುದ್ಧದ ಅಭಿಯಾನವನ್ನು ಶ್ಲಾಘಿಸಿದ್ದಾರೆ. ಅವರಂತಹ ಹೋರಾಟಗಾರರು, ಹಿರಿಯ ಮಾರ್ಗದರ್ಶನ, ಸಂದೇಶ ಎಲ್ಲರಿಗೂ ಅಗತ್ಯವಿದೆ ಎಂದು ಹೇಳಿದರು.

ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್‌, ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next