Advertisement

ಜಾತಿ ಆಧಾರಿತ ವೃತ್ತಿ ತ್ಯಜಿಸಿ

04:10 PM Apr 15, 2018 | |

ಇಳಕಲ್ಲ: ಜಾತಿ ಆಧಾರಿತ ವೃತ್ತಿಗಳನ್ನು ತ್ಯಜಿಸಬೇಕು. ಬುದ್ಧನೆಡೆಗೆ ಸಾಗುವ ಮೂಲಕ ಮರಳಿ ಮನೆಗೆ ಹೋಗಬೇಕು ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.

Advertisement

ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತ್ಯುತ್ಸವ ಸಮಾರಂಭದಲ್ಲಿ ಅಂಬೇಡ್ಕರ್‌ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ವಿಚಾರಗಳ ವರ್ತಮಾನದ ಮುಖಾಮುಖಿ ವಿಷಯವಾಗಿ ಉಪನ್ಯಾಸ ನೀಡಿದರು.

ದಲಿತರ ಕಲ್ಯಾಣಕ್ಕೆ ಬಳಸುವ ಅನುದಾನದಲ್ಲಿ ಸಿ.ಸಿ ರಸ್ತೆ, ಒಂದೆರಡು ಸಮುದಾಯ ಭವನ ಕಟ್ಟುವುದು ದಲಿತರಲ್ಲಿ ಬದಲಾವಣೆ ತರುವುದಿಲ್ಲ. ದಲಿತ ಸಮುದಾಯದ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಸಹಕರಿಸಿ, ಸಮಾಜದಲ್ಲಿ ಸಮಾನವಾಗಿ ಕಂಡರೆ ಮಾತ್ರ ಅದು ಬದಲಾವಣೆ ಎನಿಸಿಕೊಳ್ಳುತ್ತದೆ
ಎಂದರು.

ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣ ಒಂದೇ ಅಸ್ತ್ರ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ. ವಿದ್ಯಾರ್ಥಿಗಳು ಸಹ ಜಿದ್ದಿಗೆ ಬಿದ್ದವರಂತೆ ಓದಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದರು. ಬೀದರಿನ ಭಂತೇ ಸಂಘಪಾಲ ಸಾನ್ನಿಧ್ಯ ವಹಿಸಿದ್ದರು. ಸಿದ್ದಣ್ಣ ಆಮದಿಹಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ ಸೇವಾ ಸಮಿತಿ ಹಾಗೂ ಯುವ ದಲಿತ ವೇದಿಕೆಯಿಂದ ಗಿರೀಶ ಅಚನೂರ ಅವರನ್ನು
ಸನ್ಮಾನಿಸಲಾಯಿತು. ನಗರಸಭೆ ಸದಸ್ಯರಾದ ಶೋಭಾ ಆಮದಿಹಾಳ, ಮಂಜುನಾಥ ಹೊಸಮನಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next