Advertisement

ಕ್ಷಿಪಣಿ ಪರೀಕ್ಷೆ ಯಶಸ್ವಿ

02:37 AM Aug 05, 2019 | mahesh |

ಬಾಲಸೋರ್‌: ಡಿಆರ್‌ಡಿಒ ಅಭಿವೃದ್ಧಿಪಡಿಸಿದ ತ್ವರಿತ ಪ್ರತಿಕ್ರಿಯೆಯ (ಕ್ಯೂಆರ್‌ಎಸ್‌ಎಎಂ) ಕ್ಷಿಪಣಿಯನ್ನು ಒಡಿಶಾದ ಬಾಲಸೋರ್‌ ನೆಲೆಯಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ರವಿವಾರ ಮಧ್ಯಾಹ್ನ 11.05 ಕ್ಕೆ ಟ್ರಕ್‌ ಮೇಲೆ ಅಳವಡಿಸಿದ ಸಾಧನದ ಮೂಲಕ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿ ಎಲ್ಲ ಹವಾಮಾನದಲ್ಲಿ ಮತ್ತು ಎಲ್ಲ ಸ್ಥಳದಲ್ಲೂ ಕೆಲಸ ಮಾಡಬಹುದಾ ಗಿದ್ದು, ಟ್ರಕ್‌ನಿಂದಲೇ ಉಡಾವಣೆ ಮಾಡಬಹುದು. ಅಷ್ಟೇ ಅಲ್ಲ, ಯುದ್ಧ ವಿಮಾನಗಳ ರಾಡಾರ್‌ ಮೂಲಕ ಈ ಕ್ಷಿಪಣಿ ದಿಕ್ಕು ತಪ್ಪಿಸುವುದರ ವಿರುದ್ಧ ರಕ್ಷಣೆಯನ್ನೂ ಹೊಂದಿದೆ. 25-30 ಕಿ.ಮೀ. ದೂರ ಹಾರಬಲ್ಲ ಸಾಮರ್ಥ್ಯ ಹೊಂದಿದೆ. 2017ರ ಜೂನ್‌ 4 ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು. ಅನಂತರ 2019 ಫೆಬ್ರವರಿಯಲ್ಲೂ ಎರಡು ಸುತ್ತಿನ ಪರೀಕ್ಷೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next