Advertisement

ಶೀಘ್ರ ಕರ್ನಾಟಕ, ತಮಿಳುನಾಡು ಸಿಎಂಗಳ ಭೇಟಿ ಸಾಧ್ಯತೆ

06:00 AM Jan 31, 2018 | Harsha Rao |

ಚೆನ್ನೈ: ಕಾವೇರಿ ನದಿ ಪಾತ್ರದ ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಬೆಳೆಯುವ ಸಾಂಬಾ ಬೆಳೆಗೆ ಅಗತ್ಯ ನೀರು ಬಿಡುಗಡೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ತಮ್ಮ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆತಂದು ಆಗ್ರಹಿಸಲು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನಿರ್ಧರಿಸಿದ್ದಾರೆ.

Advertisement

ಸೋಮವಾರ ಚೆನ್ನೈಯಲ್ಲಿ  ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಭೇಟಿಗಾಗಿ ಈಗಾಗಲೇ ಕರ್ನಾಟಕ ಸರಕಾರಕ್ಕೆ ಮನವಿ ಯನ್ನೂ ಸಲ್ಲಿಸಲಾಗಿದೆ ಎಂದು ಮಂಗಳವಾರ ತಮಿಳುನಾಡು ಸರಕಾರದ ವತಿಯಿಂದ ಹೊರಡಿ ಸಲಾಗಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ತಮಿಳುನಾಡು ವಾದವೇನು?
ಸಾಂಬಾ ಬೆಳೆ ರಕ್ಷಣೆಗಾಗಿ 2007ರಲ್ಲಿ  ಕಾವೇರಿ ನ್ಯಾಯಮಂಡಳಿ ತೀರ್ಪಿನಂತೆ ನೀರು ಬಿಡುವಂತೆ ಕೋರುವುದು ಈ ಭೇಟಿಯ ಮೂಲ ಉದ್ದೇಶ. ಜ. 13ರಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಪಳನಿಸ್ವಾಮಿ, ಕರ್ನಾಟಕದಿಂದ ತಮಿಳುನಾಡಿಗೆ ಈ ಸಂದರ್ಭದಲ್ಲಿ 179.871 ಟಿಎಂಸಿ ಅಡಿ ನೀರು ಹರಿದುಬರ ಬೇಕಿತ್ತು. ಆದರೆ, ಜ. 9ರ ಮಾಪನದ ಅನುಸಾರ 111.647 ಟಿಎಂಸಿ ಅಡಿಗಳಷ್ಟು ನೀರು ಹರಿದುಬಂದಿದೆ. ಹಾಗಾಗಿ, ಬಾಕಿಯಿರುವ 68.224 ಟಿಎಂಸಿ ಅಡಿಗಳಷ್ಟು  ನೀರನ್ನು ಕೂಡಲೇ ಹರಿಸಬೇಕೆಂದು ಕೋರಿದ್ದರು. 2007ರ ಕಾವೇರಿ ನ್ಯಾಯಮಂಡಳಿಯ ತೀರ್ಪಿನ  ಪ್ರಕಾರ, ಕರ್ನಾಟಕ ರಾಜ್ಯವು ತಮಿಳುನಾಡಿಗೆ ಪ್ರತಿ ವರ್ಷ 192 ಟಿಎಂಸಿ ಅಡಿಗಳಷ್ಟು ನೀರನ್ನು ಬಿಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next