Advertisement

ಮುಂಗಡ ಹಣ ನೀಡುವವರಿಗೆ ಶೀಘ್ರ ನಿವೇಶನ

03:16 PM Feb 15, 2021 | Team Udayavani |

ದೇವನಹಳ್ಳಿ: ವರ್ಷದೊಳಗಾಗಿ ಎಲ್ಲ ಸದಸ್ಯರಿಗೆ ಯಾರು ನಿಗದಿತ ಸಮಯದಲ್ಲಿ ಮುಂಗಡ ಹಣ ಸಂದಾಯ ಮಾಡುವವರಿಗೆ ಶೀಘ್ರ ನಿವೇಶನ ಹಂಚುವ ಕಾರ್ಯ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರನೌಕರರ ಕ್ಷೇಮಾಭಿವೃದ್ಧಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್‌ ಗುರಿಕಾರ್‌ ತಿಳಿಸಿದರು.

Advertisement

ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಸಮೀಪದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಗೃಹ ನಿರ್ಮಾಣ ಸಹಕಾರ ಸಂಘದಿಂದ ಎಸ್‌ಎಂಎಸ್‌ ಬಿಲ್ಡರ್ ಮತ್ತು ಡೆವಲಪರ್ ಮುಖ್ಯಸ್ಥ ವಿ.ಶಾಂತಕುಮಾರ್‌ ಹಾಗೂ ಸಹೋದರರ ಸಹಯೋಗದಲ್ಲಿ ಶಿಕ್ಷಕರ ಬಡವಣೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಿವೇಶನ ನೀಡುವ ಗುರಿ: ಯಾವ ಸದಸ್ಯರು ನೋಂದಾಯಿಸಿಕೊಂಡಿದ್ದಾರೆಯೋ ಅವರಿಗೆ ಮೊದಲಹಂತದಲ್ಲಿ ನಿವೇಶನ ನೀಡುವ ಗುರಿಹೊಂದಲಾಗಿದೆ. 96 ಎಕರೆ ಸರ್ಕಾರದಿಂದ ಸಂಪೂರ್ಣವಾಗಿಭೂಪರಿವರ್ತನೆಯಾಗಿದೆ ಎಂದರು. ರಾಜ್ಯ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ವೆಂಕಟಾಚಲಯ್ಯ, ನಾಗ ರಾಜು, ಹೀರೇಮಠ್, ಮುನಿಶಾಮಪ್ಪ, ಕಾರ್ಯದರ್ಶಿ ಲಕ್ಕಣ್ಣ, ವಿ.ವೆಂಕಟಪ್ಪ, ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಪ್ರವೀಣ್‌ ರುದ್ದಂ, ವಿನೋದ್‌ ಶಿವರಾಜ್‌, ಸಿ.ಪ್ರಸನ್ನ ಕುಮಾರ್‌, ಮುಖಂಡ ಕೃಷ್ಣೇಗೌಡ, ಕೆ.ಶ್ರೀನಿವಾಸ್‌, ಎಸ್‌.ಕೆ.ಆನಂದ್‌, ಅರ್ಶಿ ಗೌಡ, ಚಿನ್ನಕೆಂಪನಹಳ್ಳಿ ಆನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next