Advertisement

ಪ್ರಧಾನಿ ಮೋದಿ ಮೌನದ ಬಗ್ಗೆ ಒವೈಸಿ ಪ್ರಶ್ನೆ

08:00 AM Dec 11, 2017 | Team Udayavani |

ಹೈದರಾಬಾದ್‌: ಮುಸ್ಲಿಮರನ್ನು ಅವಮಾನ ಮಾಡಿದ ಕರ್ನಾಟಕದ ಕೇಂದ್ರ ಸಚಿವರ ಬಗ್ಗೆ ಪ್ರಧಾನಿ ಮೋದಿ ಅವರು ಮೌನ ವಹಿಸಿದ್ದಾರೆ. ಮೋದಿ ಅವರು ಇಡೀ ದೇಶದ ಪ್ರಧಾನಿಯಾಗಿದ್ದರೆ, ಆ ಸಚಿವರನ್ನು ಕೂಡಲೇ ವಜಾಗೊಳಿಸಲಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ಇಡೀ ದೇಶಕ್ಕೆ ಪ್ರಧಾನಿಯೇ ಅಥವಾ ಹಿಂದೂಗಳಿಗೆ ಮಾತ್ರ ಪ್ರಧಾನಿಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ರಾಜಸ್ಥಾನದಲ್ಲಿ ಲವ್‌ ಜಿಹಾದ್‌ ಹೆಸರಿನಲ್ಲಿ ಮುಸ್ಲಿಂ ಕಾರ್ಮಿಕರನ್ನು ಹತ್ಯೆಗೈದಿದ್ದರ ಬಗ್ಗೆ ಪ್ರಧಾನಿ ಮಾತನಾಡುವುದಿಲ್ಲ. ಆದರೆ ಗುಜರಾತ್‌ನಲ್ಲಿ ತನ್ನ ಮೇಲೆ ಮಾಡಿದ ಆರೋಪಗಳಿಂದ ಮನಸಿಗೆ ನೋವಾಗುತ್ತದೆ ಎಂದು ಮೋದಿ ಹೇಳುತ್ತಾರೆ ಎಂದು ಒವೈಸಿ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next