Advertisement

ಕ್ವಾರಂಟೈನ್ ನಲ್ಲಿದ್ದ ಎರಡು ತಿಂಗಳ ಹಿಂದೆ ಮದುವೆಯಾದ ಯುವಕ ಆತ್ಮಹತ್ಯೆ

09:11 AM May 26, 2020 | keerthan |

ಬೀದರ್: ಮುಂಬೈನಿಂದ ವಾಪಸ್ ಬಂದು ಕ್ವಾರಂಟೈನ್ ನಲ್ಲಿದ್ದ ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪೂರ ಗ್ರಾಮದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗಿನ ಜಾನ ನಡೆದಿದೆ.

Advertisement

22 ವರ್ಷದ ಯುವಕ ಔರಾದ ತಾಲೂಕಿನ ಮರಪಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತನ್ನ ಪತ್ನಿಯೊಂದಿಗೆ ಕಳೆದ ಎಂಟು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ.

ಇಂದು ಮುಂಜಾನೆ ಪತ್ನಿ ಸ್ನಾನಕ್ಕೆಂದು ಹೋದಾಗ ಈತ ನೇಣಿಗೆ ಶರಣಾಗಿದ್ದಾನೆ. ಎರಡು ತಿಂಗಳ ಹಿಂದೆಯಷ್ಟೇ ಇವರ ಮದುವೆ ನೆರವೇರಿತ್ತು. ಸ್ಥಳಕ್ಕೆ ಔರಾದ ಪೊಲೀಸ ಠಾಣೆಯ ಪಿಎಸ್ ಐ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next