Advertisement

ಕೆಲಸಕ್ಕೆ ಬಂದವರಿಗೆ ಕ್ವಾರಂಟೈನ್‌ ಸೀಲ್‌!

04:19 AM May 14, 2020 | Lakshmi GovindaRaj |

ಬೆಂಗಳೂರು: ಕರ್ತವ್ಯಕ್ಕೆ ಹಾಜರಾಗಲು ಹೊರ ಜಿಲ್ಲೆಗಳಿಂದ ಬರುವ ಸಾರಿಗೆ ನೌಕರರಿಗೆ ಸ್ಥಳೀಯ ವಾಗಿ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಇದರಿಂದ ನೌಕರರು ಸೇವೆಗೆ ಮರಳಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಸುಮಾರು 60-65 ಸಾವಿರ ಸಾರಿಗೆ ನೌಕರರಿದ್ದಾರೆ. ಇದರಲ್ಲಿ ಬಹುತೇಕರು ಹೊರ ಜಿಲ್ಲೆಗಳು ಅದರಲ್ಲೂ ಉತ್ತರ ಕರ್ನಾಟಕದವರು ಅಧಿಕ ಸಂಖ್ಯೆಯಲ್ಲಿದ್ದಾರೆ.

Advertisement

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಅವರೆಲ್ಲರೂ  ಊರುಗಳಿಗೆ ತೆರಳಿ ದ್ದರು. ಈಗ ಅಗತ್ಯ ಸೇವೆ, ಒಪ್ಪಂದಕ್ಕೊಳಪಟ್ಟ ಸೇವೆ ಸೇರಿದಂತೆ ಹಲವು ಉದ್ದೇ ಶ ಗಳಿಗಾಗಿ ಬಸ್‌ಗಳು ರಸ್ತೆಗಿಳಿಯುತ್ತಿವೆ. ಈ ಮಧ್ಯೆ ಲಾಕ್‌ಡೌನ್‌ ಸಡಿಲಿ ಕೆಯೂ ಆಗಿದೆ. ಈ ಹಿನ್ನೆಲೆ ಯಲ್ಲಿ ನೌಕರರು ಕರ್ತವ್ಯಕ್ಕೆ ಹಾಜರಾಗಲು ಆಸಕ್ತಿ ತೋರಿಸುತ್ತಿದ್ದಾರೆ. ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲ ಬುರಗಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ದಾವ ಣ  ಗೆರೆ, ಮಂಡ್ಯ ಮತ್ತಿತರ ಕಡೆಗಳಿಂದ ಕೆಲಸಕ್ಕೆ ಹಾಜರಾಗಲು ಬೆಂಗಳೂರು, ಮೈಸೂರು  ಸೇರಿದಂತೆ ನಿಗಮಗಳ ವ್ಯಾಪ್ತಿಯಲ್ಲಿರುವ ಘಟಕಗಳತ್ತ ಮುಖ ಮಾಡುತ್ತಿದ್ದಾರೆ.

ಆದರೆ, ಹೀಗೆ ಬೇರೆ ಊರುಗಳಿಂದ ಬಂದವರ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಆ ಮೂಲಕ ಕ್ವಾರಂಟೈನ್‌ ಮುದ್ರೆ ಹಾಕುತ್ತಿರುವುದು  ಕಂಡುಬರುತ್ತಿದೆ. ಇದು ಸಾರಿಗೆ ನಿಗಮಗಳಿಗೆ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ನಗರದಲ್ಲಿ ಕಾರ್ಯನಿರ್ವಹಿಸುವ ಸಾರಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬಾಡಿಗೆ ಮನೆ ಗಳಲ್ಲಿ ದ್ದಾರೆ. ಲಾಕ್‌ಡೌನ್‌ ಸಡಿಲಿಕೆ  ಹಿನ್ನೆಲೆಯಲ್ಲಿ ನೌಕ ರರು ಕೆಲಸಕ್ಕೆ ಹಾಜರಾಗಲು ಆಗಮಿಸುತ್ತಿದ್ದಂತೆ, ಕ್ವಾರಂ ಟೈನ್‌ ಮಾಡಲಾಗುತ್ತಿದೆ. ಇದರಿಂದ ಕೆಲವರು ನಗರಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು  “ಉದಯವಾಣಿ’ಗೆ ತಿಳಿಸಿವೆ.

ರ್‍ಯಾಂಡಮ್‌ ಪರೀಕ್ಷೆ ಅಗತ್ಯ: ಎರಡೂ ನಿಗಮಗಳಲ್ಲಿ ಕಾರ್ಯನಿರ್ವಹಿಸುವ ನೌಕರರಲ್ಲಿ ಬಹುತೇಕ ಉತ್ತರ ಕರ್ನಾಟಕದವರಾಗಿದ್ದಾರೆ. ಆ ಪೈಕಿ ಕೆಲವು ಜಿಲ್ಲೆಗಳು ಈಗಾಗಲೇ ಕೆಂಪು ವಲಯದಲ್ಲಿದ್ದು, ಅತ್ಯಂತ ವೇಗ ವಾಗಿ ಹರಡುತ್ತಿದೆ.  ಅಂತಹ ಪ್ರದೇಶಗಳಿಂದ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದ್ದರಿಂದ ರ್‍ಯಾಂಡಮ್‌ ಪರೀಕ್ಷೆ ಅಗತ್ಯವಿದೆ ಎಂಬ ಅಭಿಪ್ರಾಯ ಸ್ವತಃ ಬಿಎಂಟಿಸಿ ಅಧಿಕಾರಿಗಳ ವಲಯ ದಲ್ಲಿ ಕೇಳಿಬರುತ್ತಿದೆ. ಬರೀ ಬಿಎಂಟಿಸಿಯಲ್ಲೇ 35  ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಚಾಲಕ ಮತ್ತು ನಿರ್ವಾಹಕರು ಹಾಗೂ ಮೆಕಾನಿಕ್‌ಗಳು ಅಧಿಕ ಸಂಖ್ಯೆ ಯಲ್ಲಿದ್ದಾರೆ.

ಈಗಾಗಲೇ ಕರ್ತವ್ಯಕ್ಕೆ ಹಾಜರಾಗಲು ವೈದ್ಯಕೀಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯ  ಗೊಳಿಸಲಾಗಿದೆ. ಆದರೆ, ಪ್ರಮಾಣಪತ್ರ ನೀಡುವ ವೇಳೆ ಕೇವಲ ಜ್ವರ ಅಥವಾ ಶೀತದಂತಹ ಅಂಶಗಳನ್ನು ಪರೀಕ್ಷಿಸಿ ನೀಡಲಾಗುತ್ತದೆ. “ಕೋವಿಡ್‌-19’ರ ಪರೀಕ್ಷೆ ನಡೆಸುವುದಿಲ್ಲ; ಅದಕ್ಕೆ ಸಂಬಂಧಿಸಿದ ಉಪಕರಣಗಳ ಲಭ್ಯತೆಯೂ  ಅಲ್ಲಿಲ್ಲ. ಹೀಗಿರುವಾಗ, ಪರಿಣಾಮಕಾರಿ  ಯಾಗಿ ಆಗದು. ಹಾಗಂತ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೊಳಪಡಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ರ್‍ಯಾಂಡಮ್‌ ಪರೀಕ್ಷೆ ಸೂಕ್ತ. ಇದರಿಂ ದ ಮುಂದಿನ  ದಿನಗಳಲ್ಲಿ ಬಸ್‌ನಲ್ಲಿ ಸಂಚರಿ ಸುವ ಪ್ರಯಾ ಣಿಕರಿಗೂ ಮಾನಸಿಕಸ್ಥೈರ್ಯ ಹೆಚ್ಚು ತ್ತದೆ. ಒಂದು ವೇಳೆ ಯಾವುದಾದರೂ ಒಂದು ಪ್ರಕರಣ “ಪಾಸಿಟಿವ್‌’ ಆದರೂ ಸಮಸ್ಯೆ ಬಿಗಡಾಯಿ ಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ  ಇಂತಹ ದ್ದೊಂದು ಪರೀಕ್ಷೆ ಆಗಬೇಕಿದೆ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

Advertisement

ರ್‍ಯಾಂಡಮ್‌ ಟೆಸ್ಟ್‌ ಕಷ್ಟ; ಎಂಡಿ: ಈಗಲೇ ಕರ್ತವ್ಯಕ್ಕೆ ಹಾಜರಾಗುವಂತೆ ಯಾರಿಗೂ ಸೂಚಿಸಿಲ್ಲ. ಸದ್ಯಕ್ಕೆ ಅಗತ್ಯ ಸೇವೆಗಳಿಗೆ ನೀಡಲಾಗಿರುವ ಬಸ್‌ಗಳಲ್ಲಿ ಸುಮಾರು ಐದು ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿ ದ್ದಾರೆ. ಉಳಿದವರು  ಲಾಕ್‌ಡೌನ್‌ ತೆರವಾದ ನಂತರ ಹಂತ- ಹಂತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಅವರೆಲ್ಲರನ್ನೂ ತಪಾಸಣೆಗೊಳಪಡಿಸಲಾಗುತ್ತಿದೆ. ರ್‍ಯಾಂಡಮ್‌ ಟೆಸ್ಟ್‌ ಕಷ್ಟವಾಗಬಹುದು. ಆದರೆ, ಸಾಕಷ್ಟು ಸಮಯಾವಕಾಶ ಇರುವುದರಿಂದ ಸಾಮಾನ್ಯ  ಪರೀಕ್ಷೆಗೊಳಪಡಿಸಲಾಗು ವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲೇ ಸಾಕಷ್ಟು ಒತ್ತಡ ಇದೆ. ನಿತ್ಯ ಸಾವಿರಾರು ಜನ ಅಲ್ಲಿ ಪರೀಕ್ಷೆಗೊಳಪಡುತ್ತಿದ್ದಾರೆ. ಅಂತ ಹದ್ದರಲ್ಲಿ  ಸಿಬ್ಬಂದಿ ಪರೀಕ್ಷೆ ಮತ್ತಷ್ಟು ಒತ್ತಡ ಆಗಬಹುದು ಎಂಬ ಕಾರಣಕ್ಕೆ ನಮ್ಮಲ್ಲಿರುವ ವ್ಯವಸ್ಥೆಯಲ್ಲೇ ತಪಾಸಣೆ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು.

ರ್‍ಯಾಂಡಮ್‌ ಟೆಸ್ಟ್‌ ಮಾಡಿದರೂ ಇಲ್ಲಿ ಸ್ಪಷ್ಟತೆ ಸಿಗುವುದಿಲ್ಲ. ಹಾಗಾಗಿ ಇದು ಉಪಯೋಗ ಆಗುವುದಿಲ್ಲ. ಇನ್ನು ಎಲ್ಲ ಸಿಬ್ಬಂದಿ ಪರೀಕ್ಷೆಗೊಳಪಡಿಸಲು ಸದ್ಯದ ಸ್ಥಿತಿಯಲ್ಲಿ ಕಷ್ಟವೂ ಇದೆ. ಆದ್ದರಿಂದ ಲಕ್ಷಣಗಳು  ಕಂಡುಬರುವಂತಹವರನ್ನು ಹಾಗೂ ಆಯಾ ಜಿಲ್ಲೆಗಳಲ್ಲಿ ಕಂಟೈನ್ಮೆಂಟ್‌ ವಲಯದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸ ಬೇಕಾಗುತ್ತದೆ.
-ಡಾ.ವಿ. ರವಿ, ವೈರಾಲಜಿ ವಿಭಾಗ ಮುಖ್ಯಸ್ಥರು, ನಿಮ್ಹಾನ್ಸ್‌

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next