Advertisement

ಲಾಕ್ ಡೌನ್ ಮುಗಿಸಿ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ಇದನ್ನು ಕಂಡು ಅಚ್ಚರಿ!

01:46 AM May 05, 2020 | Hari Prasad |

ಕಣ್ಣೂರು: ಲಾಕ್‌ಡೌನ್‌ ಹೇರಿದ್ದ ಕಾರಣ ಒಂದು ತಿಂಗಳ ಕಾಲ ಮುಚ್ಚಲಾಗಿದ್ದ ಆಭರಣ ಅಂಗಡಿಯನ್ನು ತೆರೆದ ಮಾಲೀಕರು ಎದುರಾದ ಮೊದಲ ಗ್ರಾಹಕರನ್ನು ನೋಡಿ ಬೆಚ್ಚಿದ್ದಾರೆ.

Advertisement

ಪಯ್ಯನೂರ್‌ನ ಸಜಿತ್‌ ಎಂಬವರ ಆಭರಣದ ಅಂಗಡಿಯಲ್ಲಿ ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗ ದಲ್ಲಿ 3 ಮೀಟರ್‌ ಉದ್ದದ ಹೆಬ್ಟಾವು ತನ್ನ 20 ಮೊಟ್ಟೆಗಳ ಜೊತೆ ಆಶ್ರಯ ಪಡೆದುಕೊಂಡಿತ್ತು.

ಬಾಗಿಲು ತೆರೆದು ಹೆಬ್ಟಾವನ್ನು ನೋಡಿದಾಗ ಒಮ್ಮೆಲೆ ಕಿರುಚಿಕೊಂಡೆ, ಬಳಿಕ ಸಾವರಿಸಿಕೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿದೆ. ಅವರು ಬಂದು ಹಾವು ಹಿಡಿದರು. ಹಾವು ಮತ್ತು ಮೊಟ್ಟೆಗಳನ್ನು ಅವರು ಒಯ್ದಿದ್ದಾರೆ.

ಮೊಟ್ಟೆಯಿಂದ ಮರಿ ಹೊರಬರವವರೆಗೂ ಅವರು ಅವನ್ನು ರಕ್ಷಿಸುತ್ತಾರೆ ಎಂದು ಅಂಗಡಿ ಮಾಲಿಕ ಸಜಿತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next