Advertisement

ಪ್ರಶಸ್ತಿ ಉಳಿಸಿಕೊಳ್ಳಲು ಪಿ. ವಿ. ಸಿಂಧುಗೆ ಸತ್ವಪರೀಕ್ಷೆ

10:12 AM Dec 12, 2019 | Team Udayavani |

ಗ್ವಾಂಗ್‌ಝೂ: ಭಾರತದ ಸ್ಟಾರ್‌ ಶಟ್ಲರ್‌ ಮತ್ತು ಹಾಲಿ ಚಾಂಪಿ ಯನ್‌ ಆಗಿರುವ ಪಿ.ವಿ. ಸಿಂಧು ಬುಧವಾರದಿಂದ ಆರಂಭವಾಗುವ ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Advertisement

ವಿಶ್ವ ಚಾಂಪಿಯನ್‌ ಪ್ರಶಸ್ತಿ ಗೆದ್ದ ಬಳಿಕ ಹಲವು ಕೂಟಗಳಲ್ಲಿ ಸಿಂಧು ಭಾಗವಹಿಸಿದ್ದರೂ ಗಮನಾರ್ಹ ನಿರ್ವ ಹಣೆ ನೀಡಲು ವಿಫ‌ಲರಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ತನ್ನ ಬಾಳ್ವೆಯ ಮಹೋನ್ನತ ಸಾಧನೆ ಮಾಡಿದ ಬಳಿಕ ಸಿಂಧು ಕೊರಿಯ, ಚೀನ ಓಪನ್‌ನ ಮೊದಲ ಸುತ್ತಿನಲ್ಲಿ ಮುಗ್ಗರಿಸಿದ್ದರೆ ಮೂರು ಪ್ರಮುಖ ಕೂಟಗಳಲ್ಲಿ ದ್ವಿತೀಯ ಸುತ್ತಿನಲ್ಲಿ ಸೋತಿದ್ದರು. ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಹೀಗಾಗಿ ಸಿಂಧು ಅವರಿಗೆ ಈ ಕೂಟ ನಿಜವಾಗಿಯೂ ಸತ್ವಪರೀಕ್ಷೆಯಾಗಿದೆ ಮಾತ್ರವಲ್ಲದೇ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಕೂಟ ಮಹತ್ವದ್ದಾಗಿದೆ.

ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ನ ಅಗ್ರ 8 ಮಂದಿ ಮಾತ್ರ ಈ ಕೂಟದಲ್ಲಿ ಭಾಗವಹಿ ಸಲಿದ್ದಾರೆ. ಸಿಂಧು 15ನೇ ರ್‍ಯಾಂಕ್‌ ಹೊಂದಿದ್ದರೂ ವಿಶ್ವ ಚಾಂಪಿಯನ್‌ ಆಗಿರುವ ಕಾರಣ ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. “ಎ’ ಬಣದಲ್ಲಿರುವ ಸಿಂಧು ಅವರು ಚೀನದ ಚೆನ್‌ ಯು ಫೀ, ಹಿ ಬಿಂಗ್‌ ಜಿಯೊ ಮತ್ತು ಜಪಾನಿನ ಯಮಗುಚಿ ಜತೆ ಸ್ಪರ್ಧಿಸಲಿದ್ದಾರೆ.

ಜಪಾನಿನ ಅಕಾನೆ ಯಮಗುಚಿ ಅವರನ್ನು ಎದರಿಸುವ ಮೂಲಕ ಸಿಂಧು ತನ್ನ ಅಭಿಯಾನ ಆರಂಭಿಸಲಿದ್ದಾರೆ. ಗಾಯದ ಸಮಸ್ಯೆಗೆ ಸಿಲುಕುವ ಮೊದಲು ಇಂಡೋನೇಶ್ಯ ಮತ್ತು ಜಪಾನ್‌ ಓಪನ್‌ ಕೂಟದ ಪ್ರಶಸ್ತಿ ಗೆದ್ದಿದ್ದ ಯಮಗುಚಿ ಆಬಳಿಕ ನಾಲ್ಕು ಕೂಟಗಳಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಆದರೆ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ತಲುಪುವ ಮೂಲಕ ಮತ್ತೆ ಫಾರ್ಮ್ಗೆ ಮರಳಿರುವ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next