Advertisement

ಕೆರೆಗೆ ಬಿದ್ದ ಮೊಸಳೆ ಸೆರೆ

09:16 PM Oct 08, 2021 | Team Udayavani |

ಪುತ್ತೂರು : ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದ ಕೆರೆಯೊಂದಕ್ಕೆ ಬಿದ್ದಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಸೆರೆ ಹಿಡಿದು ಕುಮಾರಧಾರಾ ನದಿಗೆ ಬಿಟ್ಟ ಘಟನೆ ಅ.7 ರಂದು ನಡೆದಿದೆ.

Advertisement

ಕುಮಾರಮಂಗಲ ನಿವಾಸಿ ಚನಿಯ ಅವರ ತೋಟದಲ್ಲಿರುವ ಕೆರೆಗೆ ಮೊಸಳೆ ಬಿದ್ದಿರುವ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ತೆರಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮತ್ತು ವಲಯ ಅರಣ್ಯಾಧಿಕಾರಿಗಳಾದ  ಸುಬ್ಬಯ್ಯ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ಸತ್ಯನ್‌ ಡಿ ಜಿ,ಗಿರೀಶ್ ನವೀನ್ ಮತ್ತು ಉರಗತಜ್ಞ ತೇಜಸ್ ,ಪುನೀತ್, ಸಚಿನ್‌ ಅವರು ಮೊಸಳೆಯನ್ನು ಸೆರೆ ಹಿಡಿದರು.

ಇದನ್ನೂ ಓದಿ:ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು: ಕುಮಾರಸ್ವಾಮಿ

ಬಳಿಕ ಬೋನಿನ‌ ಸಹಾಯದಿಂದ ಸುರಕ್ಷಿತವಾಗಿ ಕುಮಾರಧಾರ ನದಿಗೆ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next