Advertisement

ಪುತ್ತೂರು : ಕೋಮು ಪ್ರಚೋದಕ ಸಂದೇಶ ರವಾನೆ : ಗೃಹರಕ್ಷಕ ಸಿಬಂದಿ ಅಮಾನತು

07:57 PM Apr 26, 2022 | Team Udayavani |

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸಂದೇಶ ರವಾನಿಸಿದ ಕಾರಣಕ್ಕಾಗಿ ಗೃಹರಕ್ಷಕ ದಳದ ಸಿಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

Advertisement

ಪುತ್ತೂರು ನಗರದ ಸಾಲ್ಮರ ನಿವಾಸಿ ಸಲಾಮುದ್ದೀನ್‌ ನೌಷದ್‌ ಕೋಮು ಸಾಮರಸ್ಯಕ್ಕೆ ಧಕ್ಕೆ ತರಬಹುದಾದ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಶಾಸಕ ಸಂಜೀವ ಮಠಂದೂರು ಗೃಹರಕ್ಷಕ ದಳದ ಕಮಾಂಡೆಂಡ್‌ ಮುರಳಿ ಮೋಹನ್‌ ಚೂಂತಾರ್‌ ಅವರ ಗಮನಕ್ಕೆ ತಂದು ಕ್ರಮಕ್ಕೆ ಸೂಚನೆ ನೀಡಿದ್ದರು. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿರುವ ಕಮಾಂಡೆಂಟ್‌ ಅವರು ಸಿಬಂದಿಯನ್ನು ಸೇವೆಯಿಂದ ಅಮಾನತಿನಲ್ಲಿ ಇರಿಸಿದ್ದಾರೆ.

ಇದನ್ನೂ ಓದಿ : ಮಗನ ಶವವನ್ನು ಬೈಕ್ ನಲ್ಲೇ 90K.M ಸಾಗಿಸಿದ ತಂದೆ

Advertisement

Udayavani is now on Telegram. Click here to join our channel and stay updated with the latest news.

Next