Advertisement

Putturu: ಬೆದ್ರಾಳ ತೋಡಿಗೆ ದಿಢೀರ್‌ ಕುಸಿದ ಗುಡ್ಡ, ತೋಟ ಜಲಾವೃತ; ಅಪಾಯದಲ್ಲಿ ಮನೆ

01:40 AM Aug 04, 2024 | Team Udayavani |

ಪುತ್ತೂರು: ನಗರದ ರಾಜಕಾಲುವೆ, ಉಪ ತೋಡುಗಳ ಮಳೆ ನೀರು ಹರಿಯುವ ಬೆದ್ರಾಳ ತೋಡಿಗೆ ಗುಡ್ಡೆ ಕುಸಿದು ಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡು ಮನೆಯೊಂದು ಅಪಾಯದ ಅಂಚಿನಲ್ಲಿದೆ.

Advertisement

ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆಬೈಲಿನಲ್ಲಿ ಬೆದ್ರಾಳ ತೋಡಿಗೆ ಭಾರೀ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದು ತೋಡಿನಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಪರಿಣಾಮವಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿವೆ.

ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಎಂಜಿನಿಯರ್‌ ಸಚಿನ್‌, ಮುತ್ತು ಶೆಟ್ಟಿ ಅವರ ತೋಟಗಳು ಜಲಾವೃತಗೊಂಡಿವೆ. ತೋಡಿನ ಬದಿಯಲ್ಲಿರುವ ಯಶೋದಾ ಅವರ ಮನೆ ಅಪಾಯದ ಅಂಚಿನಲ್ಲಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ, ಪೌರಾಯುಕ್ತ ಮಧು ಎಸ್‌. ಮನೋಹರ್‌ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪುತ್ತೂರು: ರಾಜ್ಯ ಹೆದ್ದಾರಿ ಬದಿ ಕುಸಿತ
ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಆ.3 ರಾತ್ರಿ ಏಕಾಏಕಿ ಬರೆ ಕುಸಿದಿದೆ. ಕೋಡಿಂಬಾಡಿ ಸಮೀಪ ಶಾಸಕ ಅಶೋಕ್‌ ಕುಮಾರ್‌ ರೈ ಅವರ ನಿವಾಸದಿಂದ ಕೂಗಳತೆ ದೂರದಲ್ಲಿ ಘಟನೆ ನಡೆದಿದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next