Advertisement

Puttur: ಬಾವಿಗೆ ಹಾರಿ ಆತ್ಮಹತ್ಯೆ

01:06 AM Oct 27, 2023 | Team Udayavani |

ಪುತ್ತೂರು: ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಟ್ನೂರು ಗ್ರಾಮದ ಕಾವು ಮುಖಾರಿಮೂಲೆಯಲ್ಲಿ ಗುರುವಾರ ಸಂಭವಿಸಿದೆ.

Advertisement

ಮುಖಾರಿಮೂಲೆ ಜೈನುದ್ದೀನ್‌ ಅವರ ಪುತ್ರಿ ಆಯಿಷಾ (31) ಆತ್ಮಹತ್ಯೆ ಮಾಡಿಕೊಂಡವರು. ಮೃತ ಆಯಿಷಾಗೆ ವಳಾಲಿನ ಸಲೀಂ ಅವರೊಂದಿಗೆ ವಿವಾಹವಾಗಿತ್ತು. ಸಲೀಂ ಬೆಂಗಳೂರಿನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಆಯಿಷಾ ಒಂದು ತಿಂಗಳ ಹಿಂದೆ ತನ್ನ ತಂದೆಯ ಮನೆಗೆ ಬಂದಿದ್ದರು. ಈ ಸಾವಿಗೆ ಪತಿ ಸಲೀಂ ಮಾನಸಿಕ, ದೈಹಿಕ ಕಿರುಕುಳ ಹಿಂಸೆ ನೀಡಿರುವುದೇ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯಿಷಾಳ ತಂದೆ ಜೈನುದ್ದೀನ್‌ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next