Advertisement

ಪುತ್ತೂರು: ಕೋರೆ ಮಾಲಿಕನ ಮೇಲೆ ರೌಡಿಗಳ ದಾಳಿ, ಬ್ಲೇಡ್ ಸಾದಿಕ್‌ ಸೆರೆ 

05:09 PM Jun 28, 2017 | |

ಪುತ್ತೂರು: ಇಲ್ಲಿನ ಕಬಕದಲ್ಲಿ ಕೋರೆ ಮಾಲಿಕರೊಬ್ಬರ ಮೇಲೆ ರೌಡಿಗಳ ತಂಡ ದಾಳಿ ನಡೆಸಿದ ಘಟ® ಬುಧವಾರ  ಮಧ್ಯಾಹ್ನ ನಡೆದಿದೆ.                
ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಕಾರಿನಲ್ಲಿ ಬಂದ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ  ಹಲ್ಲೆ ನಡೆಸಿದೆ. 

Advertisement

ದಾಳಿ ವೇಳೆ  ಬ್ಲೇಡ್ ಸಾದಿಕ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಪುತ್ತೂರು ಪೊಲೀಸರ ವಶಕ್ಕೆ ನೀಡಲಾಗಿದೆ. 

ಸಾದಿಕ್ನ ಐದು ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ. 

ಕೊಲೆ ಯತ್ನ, ಹಲ್ಲೆ, ಅಪಹರಣ,ಸೇರಿದಂತೆ ಕರ್ನಾಟಕ ಮತ್ತು ಕೇರಳದಲ್ಲಿ ಸಾದಿಕ್ ವಿರುದ್ಧ 12ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ರೌಡಿ ಸಾದಿಕ್ ಆಗಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next