Advertisement

ಪುತ್ತೂರು: ಅಶ್ವತ್ಥ ಮರದಲ್ಲಿ ವಲಸೆ ಹಕ್ಕಿಗಳ ಕಲರವ

10:19 PM Dec 13, 2019 | mahesh |

ಪುತ್ತೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಹಕ್ಕಿಗಳ ವಲಸೆ ಆರಂಭವಾಗುತ್ತದೆ. ಪುತ್ತೂರಿನ ಹೃದಯಭಾಗದಲ್ಲಿರುವ ಗಾಂಧಿ ಕಟ್ಟೆ ಬಳಿ ಅಶ್ವತ್ಥ ಮರಕ್ಕೆ ಲಗ್ಗೆ ಇಟ್ಟಿರುವ ವಲಸೆ ಹಕ್ಕಿಗಳ ಕಲರವ ರಾತ್ರಿ ಸಮಯದಲ್ಲಿ ವಿಶೇಷ ಗಮನ ಸೆಳೆದಿದೆ.

Advertisement

ಸಂತಾನೋತ್ಪತ್ತಿಗಾಗಿ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಭಾರತದ ಕರಾವಳಿಗೆ ವಲಸೆ ಬರುವ ರೀಪ್‌ ಎಗ್ರೇಟ್‌ ಹಾಗೂ ಎಗ್ರೆಟಾ ಗುಲಾರಿಸ್‌ ಎಂಬ ಪ್ರಭೇದದ ಕೊಕ್ಕರೆ ಪುತ್ತೂರಿನ ಕೇಂದ್ರ ಸ್ಥಾನದಲ್ಲಿರುವ ಅಶ್ವತ್ಥ ಮರಕ್ಕೆ ವಲಸೆ ಬಂದಿದೆ.

ಈ ಬೃಹತ್‌ ಅಶ್ವತ್ಥ ಮರ ಹಲವು ದಶಕಗಳಿಂದ ದೇಶ ವಿದೇಶದ ಕೊಕ್ಕರೆಗಳಿಗೆ ಆಶ್ರಯತಾಣ. ಇಲ್ಲಿಗೆ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದಿಂದ ಸಂತಾನೋತ್ಪತ್ತಿಗಾಗಿ ಈ ಕೊಕ್ಕರೆಯ ಪ್ರಭೇದಗಳು ವಲಸೆ ಬರುತ್ತಿವೆ. ಡಿಸೆಂಬರ್‌, ಜನವರಿ ವೇಳೆ ವಲಸೆ ಬರುವ ಕೊಕ್ಕರೆಗಳು ಮರದಲ್ಲಿ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮಳೆ ಆರಂಭದ ವೇಳೆ ಮತ್ತೆ ಪಶ್ಚಿಮ ಆಫ್ರಿಕಾ ಮತ್ತು ಕೆಂಪು ಸಮುದ್ರದೆಡೆಗೆ ತೆರಳುವುದು ರೂಢಿ.

ಕೊಕ್ಕರೆಯ ಸಿಂಗಾರ
ಕಳೆದ ಕೆಲವು ದಿನಗಳಿಂದ ಗಾಂಧಿಕಟ್ಟೆ, ಅಶ್ವತ್ಥಕಟ್ಟೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ಅಶ್ವತ್ಥ ಮರದ ಬಾಗಿದ ಗೆಲ್ಲುಗಳನ್ನು ಕಡಿಯಲಾಗಿದೆ. ಹಗಲಲ್ಲಿ ಆಹಾರ ಅರಸುತ್ತಾ ತೆರಳುವ ವಲಸೆ ಕೊಕ್ಕರೆಗಳು ರಾತ್ರಿ ಯಾಗುತ್ತಿದ್ದಂತೆ ಇಲ್ಲಿಗೆ ಆಗಮಿಸುತ್ತದೆ. ಜತೆಗೆ ನೀರು ಕಾಗೆ, ಸ್ಥಳೀಯ ಕೊಕ್ಕರೆಗಳೂ ಆಶ್ರಯ ಪಡೆಯುತ್ತಿದೆ. ಬಾವಲಿಗಳೂ ಇವೆ. ರಾತ್ರಿಯಾಗುತ್ತಿದ್ದಂತೆ ಉರಿಯುವ ದೀಪದಂತೆ ಕೊಕ್ಕರೆಗಳು ಮರದಲ್ಲಿ ಕಾಣಿಸುತ್ತವೆ. ಹಕ್ಕಿಗಳ ಕಲರವ ಕಿರಣ್‌ ಶಂಕರ್‌ ಮಲ್ಯ ಬೊಳುವಾರು ಕೆಮರಾ ಕಣ್ಣಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next