Advertisement

ಪುತ್ತೂರು ಬ್ಲಾಕ್‌ ಮಹಿಳಾ ಕಾಂಗ್ರೆಸ್‌: ಗೋಪೂಜೆ

12:54 PM Nov 10, 2018 | Team Udayavani |

ಬನ್ನೂರು: ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ದಿನ ಪುತ್ತೂರು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ವತಿಯಿಂದ ಬನ್ನೂರು ಸುನೀತಾ ಮೇಲ್ಮಜಲು ಅವರ ಮನೆಯಲ್ಲಿ ಸರ್ವ ಧರ್ಮೀಯರಿಂದ ಗೋಪೂಜೆ ನಡೆಯಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಗೋ ಪೂಜೆ ನೆರವೇರಿಸಿ ಮಾತನಾಡಿ, ಇಡೀ ಸಮಾಜಕ್ಕೆ ಕ್ಷೀರವನ್ನು ನೀಡುವ ಗೋವನ್ನು ನಾವೆಲ್ಲರೂ ಭಕ್ತಿಯಿಂದ ಪೂಜಿಸುವಂತಾಗಬೇಕು. ದೀಪಾವಳಿ ಹಬ್ಬವು ಪ್ರತಿಯೊಬ್ಬರ ಮನೆ ಮನದಲ್ಲಿ ಬೆಳಗಲಿ ಎಂದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಭಾಸ್ಕರಗೌಡ ಕೋಡಿಂಬಾಳ, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ಸಿಂಥಿಯಾ ಡಿ’ಸೋಜಾ, ರೂಪರೇಖಾ ಆಳ್ವ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ ನಿರ್ದೇಶಕ ರಾಜಶೇಖರ್‌ ಜೈನ್‌, ಮಹಾಬಲ ಪೂಜಾರಿ, ಗಿಲ್ಬರ್ಟ್‌ ಗೋನ್ಸಾಲ್ವಿಸ್‌, ದಿನೇಶ್‌ ಕಾಮತ್‌, ಸನಂ, ಪುಷ್ಪಲತಾ, ಭವಾನಿ, ಸುನೀತಾ, ನಿಧಿ, ಪ್ರತಿಕ್ಷಾ, ಮನಮೋಹನ್‌ ರೈ, ರಾಜೇಶ್‌, ವಿನ್ಸೆಂಟ್‌, ಹರೀಶ್‌ ರೈ, ಸುಗಂಧಿ ರೈ, ಜೆಸಿಂತಾ ಮಸ್ಕರೇನಸ್‌, ಜೆಸಿಂತಾ ಗೋನ್ಸಾಲ್ವಿಸ್‌, ನಗರಸಭಾ ನಾಮನಿರ್ದೇಶಿತ ಸದಸ್ಯ ದಿಲೀಪ್‌ ಕುಮಾರ್‌ ಮೊಟ್ಟೆತ್ತಡ್ಕ, ವೆರೋನಿಕಾ ಗೋನ್ಸಾಲ್ವಿಸ್‌, ಹರಿಣಾಕ್ಷಿ ಜೆ. ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷೆ ವಾಣಿ ಶ್ರೀಧರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next