Advertisement

Puttur ಹಲ್ಲೆ ಪ್ರಕರಣ: ದೂರು ದಾಖಲು

12:57 AM Jul 26, 2024 | Team Udayavani |

ಪುತ್ತೂರು: ಆಟೋ ಬಾಡಿಗೆ ವಿಚಾರವಾಗಿ ಆಟೋ ಚಾಲಕರೋರ್ವರಿಗೆ ಇನ್ನೋರ್ವ ಆಟೋ ಚಾಲಕ ಹಲ್ಲೆ ನಡೆಸಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಸರಗೋಡು ಆಡೂರು ನಿವಾಸಿ ವಿನೋದ್‌ ಕುಮಾರ್‌ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಜು. 23ರಂದು ವಿನೋದ್‌ ಕುಮಾರ್‌ ಅವರಿಗೆ ಆಟೋರಿಕ್ಷಾ ಚಾಲಕ ಬ್ರಿಜೇಶ್‌ ಅವರು ಕರೆ ಮಾಡಿ ಆಟೋ ಬಾಡಿಗೆ ವಿಚಾರದಲ್ಲಿ ತಕರಾರು ತೆಗೆದು ಬೆದರಿಕೆ ಒಡ್ಡಿದ್ದು, ಜು. 24ರಂದು ಬೆಳಗ್ಗೆ ವಿನೋದ್‌ ಆಟೋರಿಕ್ಷಾದಲ್ಲಿ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿರುವ ಮದ್ಯದಂಗಡಿ ಬಳಿಯಲ್ಲಿದ್ದಾಗ, ಬ್ರಿಜೇಶ್‌ ಆತನ ಆಟೋರಿಕ್ಷಾದಲ್ಲಿ ಚೇತನ್‌ ಮತ್ತು ಕಿಶೋರ್‌ರನ್ನು ಕುಳ್ಳಿಸಿರಿಕೊಂಡು ಬಂದು ವಿನೋದ್‌ರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next