Advertisement

ಪುಟ್ಟಸ್ವಾಮಿ ವಿರುದ್ಧ ಮಾನಹಾನಿ ಪ್ರಕರಣ ದಾಖಲು ಯತ್ನಕ್ಕೆ ಖಂಡನೆ

12:10 PM Oct 11, 2017 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ|ಯತ್ರೀಂದ್ರ ವಿರುದ್ಧ ಡಿನೋಟಿಫಿಕೇಶನ್‌ ಹಾಗೂ ಅಕ್ರಮ ಭೂಮಿ ನೀಡಿಕೆ ಬಗ್ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಮಾಡಿದ ಆರೋಪಗಳ ಕುರಿತು ರಾಜ್ಯ ಸರಕಾರ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮುಂದಾಗಿರುವುದು ಖಂಡನೀಯ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು. 

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟಸ್ವಾಮಿ  ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತು ರಾಜ್ಯ ಸರಕಾರದಿಂದ ದೂರು ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನೋಡಬೇಕು. ಪುಟ್ಟಸ್ವಾಮಿ ಅವರು ವೈಯಕ್ತಿಕವಾಗಿ ಆರೋಪಿಸಿದ್ದು ಇವರು ಕೂಡಾ ವೈಯಕ್ತಿಕವಾಗಿ ದೂರು ದಾಖಲಿಸಬೇಕು ಎಂದರು. 

ಐಟಿ ಅಧಿಕಾರಿಗಳ ದಾಳಿಗೆ ಪ್ರತಿಯಾಗಿ ಎಸಿಬಿ ಅಧಿಕಾರಿಗಳನ್ನು ಛೂ ಬಿಡುವ ಕಾರ್ಯವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ಕಿಳಿಯುವ ಅಧಿಕಾರಿಗಳು ಸರಕಾರಗಳು ಬದಲಾವಣೆ ಆಗುತ್ತವೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಜೋಶಿ ಎಚ್ಚರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next