Advertisement

ಪುಟ್ಟಣ್ಣಯ್ಯ ನಿಧನ ರೈತ ಹೋರಾಟಕ್ಕೆ ತುಂಬಲಾರದ ನಷ್ಟ

01:08 PM Feb 21, 2018 | Team Udayavani |

ಪಿರಿಯಾಪಟ್ಟಣ: ರೈತ ನಾಯಕ ಮತ್ತು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ನಿಧನ ಇಡೀ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹೆಚ್‌.ಎಸ್‌.ಬೋರಲಿಂಗೇಗೌಡ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಗಲಿದ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ಪಿರಿಯಾಪಟ್ಟಣ ತಾಲೂಕಿನ ರೈತ ನಾಯಕರ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಕೆ.ಎಸ್‌ ಪುಟ್ಟಣ್ಣಯ್ಯ ರೈತ ಪರ ಹೋರಾಟಗಳಲ್ಲಿ ನಮ್ಮೆಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು.

ಅವರ ಅಕಾಲಿಕ ನಿಧನ ಇಡೀ ರೈತ ಹೋರಾಟಕ್ಕೆ ದಿಕ್ಕು ಕಾಣದಂತಾಗಿದೆ. ಸಮಾಜದ ಶೋಷಿತ ವರ್ಗದ ದೀನಾದಲಿತರ ಆಶಾಕಿರಣವಾಗಿದ್ದ ಹಾಗೂ ರಾಜ್ಯದ ರೈತರ ಕಷ್ಟ-ಸುಖಗಳಿಗೆ ಗಡಿ, ನೆಲ, ನೀರಿನ ವಿಚಾರದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಅವರ ಅಕಾಲಿಕ ನಿಧನ ಬೇಸರ ತರಿಸಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ಜೆ.ಶಿವಣ್ಣೇಗೌಡ, ಕಾರ್ಯಾಧ್ಯಕ್ಷ ಬಿ.ಜೆ.ದೇವರಾಜ್‌, ಮುಖಂಡರಾದ ಕೆ.ಎನ್‌.ಸೋಮಶೇಖರ್‌, ಕೊಣಸೂರು ಸುರೇಶ್‌, ಗಣೇಶ್‌, ಪ್ರಕಾಶ್‌ರಾಜೇ ಅರಸ್‌, ಮಲ್ಲೇಶ್‌ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next