Advertisement

KCR ಬೇಡಿಕೆ ಈಡೇರಿಕೆ;ತಿಮ್ಮಪ್ಪನಿಗೆ 5 ಕೋಟಿ ರೂ. ಮೌಲ್ಯದ ಚಿನ್ನಾಭರಣ

06:05 PM Feb 21, 2017 | Team Udayavani |

ಹೈದರಾಬಾದ್:ತನ್ನ ಕೋರಿಕೆ ಈಡೇರಿಸಿದರೆ ಕಾಣಿಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಬುಧವಾರ ತಿರುಪತಿ ತಿಮ್ಮಪ್ಪನಿಗೆ ಸುಮಾರು 5.6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಅರ್ಪಿಸಲಿದ್ದಾರೆ.

Advertisement

ಕೆಸಿಆರ್ ಅವರು ಪ್ರತ್ಯೇಕ ತೆಲಂಗಾಣವಾಗಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತನ್ನ ಬೇಡಿಕೆ ಈಡೇರಿದರೆ ಚಿನ್ನಾಭರಣ ಕಾಣಿಕೆ ನೀಡುವುದಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ದೇವರುಗಳಿಗೆ ಹರಕೆ ಹೊತ್ತುಕೊಂಡಿದ್ದರು.

ಮುಖ್ಯಮಂತ್ರಿ ಕೆಸಿಆರ್ ಬಾಲಾಜಿಗೆ ಶುದ್ಧ ಚಿನ್ನದ ಆಭರಣ ಹಾಗೂ ಪದ್ಮಾವತಿಗೆ ಮೂಗು ನತ್ತನ್ನು ಕಾಣಿಕೆಯಾಗಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ. ಅಷ್ಟೇ ಅಲ್ಲ ವಾರಾಂತ್ಯದಲ್ಲಿ ಕುರವಿಯಲ್ಲಿರುವ ವೀರಭದ್ರಸ್ವಾಮಿ ದೇವರಿಗೆ ಶುದ್ಧ ಚಿನ್ನದಿಂದ ಮಾಡಿರುವ ಮೀಸೆಯನ್ನು ಕಾಣಿಕೆಯಾಗಿ ನೀಡಲಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ ಹರಕೆ ಸಂದಾಯ ಮಾಡಲು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ವಿಶೇಷ ವಿಮಾನದಲ್ಲಿ ಆಂಧ್ರಪ್ರದೇಶಕ್ಕೆ ಆಗಮಿಸಿದ್ದಾರೆ. 2014ರಲ್ಲಿ ನೂತನ ತೆಲಂಗಾಣ ರಾಜ್ಯ ಆಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದ ಸಿಎಂ ಆಗಿದ್ದ ಕೆಸಿಆರ್ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯಜ್ಞ, ಯಾಗ, ಚಿನ್ನಾಭರಣ ಕಾಣಿಕೆ ಸಲ್ಲಿಸುವ ಮೂಲಕ ಟೀಕೆಗೆ ಗುರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next