Advertisement

ಬೆಂಬಲ ಬೆಲೆಯಡಿ ಫಸಲು ಖರೀದಿ: ತಹಶೀಲ್ದಾರ್‌ಗೆ ಮನವಿ 

03:10 PM Dec 11, 2021 | Team Udayavani |

ಹಾನಗಲ್ಲ: ಬೆಂಬಲ ಬೆಲೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರ ಜೊತೆಗೆ ಇತರ ಎಲ್ಲ ರೈತರ ನೋಂದಣಿ ಮಾಡಿಕೊಳ್ಳುವ ಮೂಲಕ ಎಲ್ಲ ರೈತರ ಫಸಲನ್ನು ಖರೀದಿಸುವಂತಾಗಬೇಕುಎಂದು ಹಾನಗಲ್ಲ ತಾಲೂಕು ರೈತ ಸಂಘದ ಮುಖಂಡರು ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಬುಧವಾರ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು ಮಾತನಾಡಿ,ಡಿ.1ರಿಂದ 7ರ ವರೆಗೆ ಭತ್ತ ಬೆಳೆದ ಎಲ್ಲ ರೈತರ ನೋಂದಣಿ ಮಾಡಿಸಿಕೊಳ್ಳಲಾಗಿದೆ. ಆದರೆ, ಈಗ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಮಾತ್ರ ನೋಂದಣಿಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ಉಳಿದರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ,ಸಣ್ಣ, ಅತಿ ಸಣ್ಣ ರೈತರ ಜೊತೆಗೆ ಎಲ್ಲಭತ್ತ ಬೆಳೆದ ರೈತರ ಹೆಸರನ್ನು ನೋಂದಣಿಮಾಡಿಕೊಳ್ಳುವ ಮೂಲಕ ಭತ್ತ ಬೆಳೆದ ಎಲ್ಲ ರೈತರ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಷಣ್ಮುಖಅಂದಲಗಿ, ಶಿವಕುಮಾರ ಹಣ್ಣಿ, ಶಿವನಗೌಡ ಓದೇಗೌಡ್ರ, ಗಿರಿಧರಸ್ವಾಮಿ ಹಿರೇಮಠ, ಮುತ್ತಣ್ಣ ಹಾವನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next