Advertisement

Punjalkatte ಬೊಳ್ಳಿಮಾರು ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಒಡೆದು ನಗದು ಕಳವು

12:27 AM Aug 20, 2024 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಬೊಳ್ಳಿಮಾರು ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್‌ ಕಾಣಿಕೆ ಡಬ್ಬಿಗಳನ್ನು ಆಗಸ್ಟ್‌ 17ರ ರಾತ್ರಿ ಒಡೆದು ನಗದು ಕಳವುಗೈಯಲಾಗಿದೆ. ಈ ಬಗ್ಗೆ ದೇವಸ್ಥಾನದ ಧರ್ಮದರ್ಶಿ ವಿಜಯ ಸಾಲ್ಯಾನ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಸಿಸಿ ಕೆಮರಾಗಳನ್ನು ಹಾನಿಗೊಳಿಸಿ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಹಾಗೂ ಸುಮಾರು 8 ಸಾ. ರೂ. ಮೌಲ್ಯದ ಸಿ.ಸಿ. ಕೆಮರಾದ ಡಿವಿಆರ್‌ ಕಳವು ಗೈಯ ಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುಂಜಾಲಕಟ್ಟೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next