Advertisement

Punjalkatte; ವ್ಯಕ್ತಿಗೆ ತಂಡದಿಂದ ಹಲ್ಲೆ, ಚೂರಿ ಇರಿತ

11:10 PM Dec 09, 2023 | Team Udayavani |

ಪುಂಜಾಲಕಟ್ಟೆ: ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆಗೈದು ಚೂರಿಯಿಂದ ಇರಿದ ಘಟನೆ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಡಿ. 7ರಂದು ಸಂಭವಿಸಿದೆ.

Advertisement

ಕಾವಳಪಡೂರು ಗ್ರಾಮ ನಿವಾಸಿ ಮಹಮ್ಮದ್‌ ಫಝೀಮ್‌ ಅವರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾವಳಮುಡೂರು ಗ್ರಾಮದ, ಕಾವಳಕಟ್ಟೆಯ ಸೊಸೈಟಿ ಬಳಿಯಿರುವಾಗ ಆರೋಪಿ ಮಹಮ್ಮದ್‌ ಶಮೀಮ್‌ನು ಎಚ್‌.ಇ. ಹನೀಫ್‌ರ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ಬೈದು, ಆತನ ಕೈಯಲ್ಲಿದ್ದ ಚೂರಿಯಿಂದ ತನ್ನ ತೋಳಿಗೆ ಇರಿದು ಗಾಯಗೊಳಿಸಿದ್ದಾನೆ.

ಆ ಸಮಯ ಸ್ಥಳದಲ್ಲಿದ್ದ ಇತರ ಆರೋಪಿಗಳಾದ ಫಯಾಜ್‌, ಶರೀಫ್‌, ಹನೀಫ್‌, ಗಣಿ, ಎಚ್‌.ಇ. ಹನೀಫ್‌, ಝುಬೈರ್‌, ರಿಶಾನ್‌ ಅವರೆಲ್ಲ ಸೇರಿ ಹಲ್ಲೆ ನಡೆಸಿದ್ದಾರಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ್ದಾರೆ.

Advertisement

ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next