Advertisement

Punjab: ಬಾದಲ್‌ನಲ್ಲಿ ಪ್ರಕಾಶ್‌ ಸಿಂಗ್‌ ಅಂತ್ಯಕ್ರಿಯೆ

08:15 PM Apr 27, 2023 | Team Udayavani |

ಚಂಡೀಗಢ: ಅನಾರೋಗ್ಯದ ಹಿನ್ನೆಲೆಯಲ್ಲಿ 95 ವಯಸ್ಸಿನಲ್ಲಿ ನಿಧನರಾದ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಅಂತ್ಯಕ್ರಿಯೆಯನ್ನು; ಗುರುವಾರ ಪಂಜಾಬ್‌ನ ಮುಕ್ತಸರ್‌ ಜಿಲ್ಲೆಯ ಬಾದಲ್‌ ಹಳ್ಳಿಯಲ್ಲಿ ನೆರವೇರಿಸಲಾಯಿತು. ಇದು ಅವರ ಪೂರ್ವಜರ ಗ್ರಾಮವೆನ್ನುವುದನ್ನು ಗಮನಿಸಬೇಕು. ಬಿಜೆಪಿ, ಎನ್‌ಸಿಪಿ, ಶಿರೋಮಣಿ ಅಕಾಲಿದಳ ಸೇರಿದಂತೆ ದೇಶದ ವಿವಿಧ ರಾಜಕೀಯ ಪಕ್ಷಗಳ ಹಲವಾರು ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬಾದಲ್‌ಗೆ ಅಂತಿಮನಮನ ಸಲ್ಲಿಸಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಬಾದಲ್‌ ಅವರ ಅಂತ್ಯಕ್ರಿಯೆ ನಡೆಸಲಾಗಿದ್ದು, ಸ್ವಗ್ರಾಮದಲ್ಲಿ ಒಂದು ಕಿಲೋಮೀಟರ್‌ವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗಿದೆ.

Advertisement

ಅಂತ್ಯಕ್ರಿಯೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಓಮರ್‌ ಅಬ್ದುಲ್ಲಾ, ಕೇಂದ್ರ ಸಚಿವ ಹದೀìಪ್‌ ಸಿಂಗ್‌ ಪುರಿ, ರಾಜಸ್ಥಾನ ಸಿಎಂ ಅಶೋಕ್‌ ಗೆಹಲೋತ್‌, ಹರ್ಯಾಣ ಸಿಎಂ ದುಷ್ಯಂತ್‌ ಚೌಟಾಲಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಅಂತಿಮದರ್ಶನ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next