Advertisement

ಲಾಭ ಗಳಿಸಲಿದೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

07:25 AM Oct 03, 2018 | Team Udayavani |

ತಿರುವನಂತಪುರ: ಉದ್ಯಮಿಗಳಾದ ನೀರವ್‌ ಮೋದಿ, ಮೆಹುಲ್‌ ಚೋಸ್ಕಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 14 ಸಾವಿರ ಕೋಟಿ ರೂ. ವಂಚನೆ ಎಸಗಿದ ಹೊರತಾಗಿಯೂ ಹಾಲಿ ವಿತ್ತೀಯ ವರ್ಷದಲ್ಲಿ ಲಾಭಗಳಿಸಲಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ಹೇಳಿದ್ದಾರೆ. ಜನವರಿಯಲ್ಲಿ ಹಗರಣ ಬೆಳಕಿಗೆ ಬಂದ ಬಳಿಕ ಹಲವು ಕಠಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.  ಸಂದರ್ಶನದಲ್ಲಿ ಮಾತನಾಡಿದ ಅವರು, ವಂಚನೆ ಪ್ರಕರಣದಿಂದ ಉಂಟಾದ ಆಘಾತದಿಂದ ಹೊರಬರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಹಾಲಿ ವಿತ್ತೀಯ ವರ್ಷವೇ ನಷ್ಟದಿಂದ ಹೊರಬಂದು ಲಾಭದ ಮಾರ್ಗದತ್ತ ಬ್ಯಾಂಕ್‌ ಸಾಗಲಿದೆ. ಸಾಲ ನೀಡಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಬ್ಯಾಂಕ್‌ ವಿಸ್ತರಣೆಗೆ ಸರಕಾರದಿಂದ 8, 247 ಕೋಟಿ ರೂ. ನೆರವು ಕೇಳಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next