Advertisement

ಹರ್‌ಕೀರತ್‌ ಅಹ್ಲುವಾಲಿಯಾಗೆ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿ

07:28 PM May 11, 2018 | Team Udayavani |

ಚಂಡೀಗಢ : 2018ರ ಸಾಲಿನ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಖ್ಯಾತ ತೋಟಗಾರಿಕಾ ತಜ್ಞ ಹರ್‌ಕೀರತ್‌ ಅಹ್ಲುವಾಲಿಯಾ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅಭಿನಂದಿಸಿದ್ದಾರೆ.

Advertisement

ತಮ್ಮ ಅಭಿನಂದನಾ ಸಂದೇಶದಲ್ಲಿ ಮುಖ್ಯಮಂತ್ರಿಗಳು, “ಅಹ್ಲುವಾಲಿಯಾ ಅವರ ಕಿತ್ತಳೆ ತೋಟ ರಾಜ್ಯದ ಹೆಮ್ಮೆಯಾಗಿದೆ; ಗ್ರಾಮೀಣ ಕೃಷಿ ಪ್ರವಾಸೋದ್ಯಮಕ್ಕೆ ಅಹ್ಲುವಾಲಿಯಾ ಅವರು ತಮ್ಮ ಪ್ರಗತಿಪರ ಕೃಷಿ ತಂತ್ರಜ್ಞಾನದ ಮೂಲಕ ನೀಡಿರುವ ಮಹತ್ವಪೂರ್ಣ ಕಾಣಿಕೆಯನ್ನು ಪರಿಗಣಿಸಿ ಸಂದಿರುವ ಈ ವಿಶ್ವ ಪ್ರಶಸ್ತಿ ಅವರ ಸಾಧನೆಗೆ ಸಂದಿರುವ ಪುರಸ್ಕಾರವಾಗಿದೆ’ಎಂದು ಹೇಳಿದ್ದಾರೆ.

ಅಹ್ಲುವಾಲಿಯಾ ಅವರಿಗೆ ಇದೇ ಮೇ 16ರಂದು ಮುಂಬಯಿಯಲ್ಲಿ ನಡೆಯಲಿರುವ 11ನೇ ವಿಶ್ವ ಕೃಷಿ ಪ್ರವಾಸೋದ್ಯಮ ಸಮಾವೇಶದಲ್ಲಿ 2018ರ ವಿಶ್ವ ಕೃಷಿ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next