Advertisement

ಮಾನ ಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಶಿಕ್ಷೆ

08:35 PM Aug 09, 2023 | Team Udayavani |

ಉಡುಪಿ: ಮಾನ ಹಾನಿಯಾಗುವಂತೆ ವರ್ತಿಸಿದ ಆರೋಪಿಗೆ 3 ವರ್ಷದ ಜೈಲುಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್‌ ಪ್ರಕಾಶ್‌ ಆದೇಶಿಸಿದ್ದಾರೆ.

Advertisement

ಬೈಕಾಡಿಯ ಗೋಪಾಲ ಹಾಗೂ ನಿಟ್ಟೂರಿನ ಬಾಲಕೃಷ್ಣ ಆರೋಪಿಗಳು.

ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಚೇರಿಯಲ್ಲಿ ನೌಕರನಾಗಿದ್ದು, ಅದೇ ಕಚೇರಿಯಲ್ಲಿದ್ದ ಅಜಿತ್‌ ಕುಮಾರ್‌ ಅವರು ಯುವತಿಯೊಂದಿಗೆ ಸಲುಗೆಯಿಂದ ಇರುವ ವೇಳೆ ಅವರಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಅಶ್ಲೀಲ ಛಾಯಾಚಿತ್ರ ತೆಗೆದು ಗೋಪಾಲನಿಗೆ ನೀಡಿದ್ದರು. ಬಳಿಕ ಆರೋಪಿಗಳಿಬ್ಬರು ಆ ಯುವತಿಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಒಪ್ಪದಿದ್ದಾಗ ಆ ಚಿತ್ರಗಳನ್ನು ತೋರಿಸಿ ಧಕ್ಕೆ ಉಂಟುಮಾಡಿದ್ದರು. 2014ರಲ್ಲಿ ಆಕೆ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಆಕೆಯನ್ನು ತಡೆದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಬಳಿಕ ದೂರು ದಾಖಲಾಗಿದ್ದು, ಸಾಕ್ಷಿದಾರರ ಹೇಳಿಕೆಯಿಂದ ತನಿಖೆ ನಡೆಸಿ ಇದು ದೃಢಪಟ್ಟಿದೆ. ಈ ಪೈಕಿ ಆರೋಪಿ ಗೋಪಾಲ ಮೃತಪಟ್ಟಿದ್ದಾನೆ. ಮತ್ತೂಬ್ಬ ಆರೋಪಿ ಬಾಲಕೃಷ್ಣನ ಮೇಲೆ ಪ್ರಕರಣ ದಾಖಲಾಗಿದೆ.

ಮಲ್ಪೆ ಠಾಣೆಯ ಪಿಎಸ್‌ಐ ಗಿರೀಶ್‌ ಕುಮಾರ್‌ ಎಸ್‌. ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next