Advertisement

ಮೇಳೈಸಿದ ‘ಪುನೀತ ಪರ್ವ’; ಸ್ಟಾರ್ ನಟರು ಭಾಗಿ

11:35 PM Oct 21, 2022 | Team Udayavani |

ಬೆಂಗಳೂರು: ಕರುನಾಡೇ ಕೊಂಡಾಡುವ ಪ್ರೀತಿಯ ಅಪ್ಪು ಮರೆಯಾಗಿ ವರ್ಷ ಸನಿಹವಾದರೂ, ಜನರ “ಪುನೀತ’ ಪ್ರೀತಿ ಇನ್ನೂ ಮಾಸಿಲ್ಲ ಎನ್ನುವುದಕ್ಕೆ ಶುಕ್ರವಾರ ನಡೆದ “ಗಂಧದ ಗುಡಿ’ ಪ್ರೀ ರಿಲೀಸ್‌ ಇವೆಂಟ್‌ ಕಾರ್ಯಕ್ರಮ ಸಾಕ್ಷಿಯಾಯಿತು.

Advertisement

ದಕ್ಷಿಣ ಭಾರತದ ಪ್ರಮುಖ ನಟರ ಉಪಸ್ಥಿತಿಯಲ್ಲಿ, ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಪ್ಪು ಎನ್ನುವ ಮುತ್ತು ಮತ್ತೂಮ್ಮೆ ಹೊಳೆಯಿತು. “ಪುನೀತ ಪರ್ವ’ದಲ್ಲಿ ಭಾಗಿಯಾಗಿದ್ದ ಹಿರಿ-ಕಿರಿಯ ನಟರೆಲ್ಲರೂ ಅಪ್ಪು ನೆನೆದು ಕಣ್ಣೀರಿಟ್ಟರು.

ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, “ಅಪ್ಪು ನಮ್ಮ ಜತೆ ಇವತ್ತು ಇಲ್ಲದೇ ಇದ್ದರೂ ಅವರು ಬಿಟ್ಟುಹೋಗಿರುವ ತಮ್ಮ ಆದರ್ಶಗಳ ಮೂಲಕ, ಸಿನೆಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ’ ಎಂದು ಹೇಳಿದರು.

ಗಂಧದಗುಡಿ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದೂ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next