Advertisement

‘ಕಾಂತಾರ’ ಚಿತ್ರದ ರಿಷಬ್ ಪಾತ್ರವನ್ನು ‘ಅಪ್ಪು’ ಮಾಡಬೇಕಿತ್ತು, ಆದರೆ…

10:46 AM Sep 20, 2022 | Team Udayavani |

ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ರಿಲೀಸ್ ಆಗಿರುವ ಒಂದು ಹಾಡು ಮತ್ತು ಟ್ರೈಲರ್ ನ ಮೂಲಕ ಹವಾ ಕ್ರಿಯೇಟ್ ಮಾಡಿರುವ ರಿಷಬ್ ಶೆಟ್ರ ತಂಡ ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೆ.30ರಂದು ಸಿನಿಮಾ ರಿಲೀಸ್ ಆಗುತ್ತಿದೆ.

Advertisement

ಕೆಆರ್ ಜಿ ಫಿಲಂಸ್ ನ ಕಾರ್ತಿಕ್ ಗೌಡ ಅವರು ಚಿತ್ರದ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ‘ಕಾಂತಾರ’ ಚಿತ್ರದ ಬಗ್ಗೆ ಏನಾದ್ರೂ ಕೇಳಿ ಎಂದು ಪೋಸ್ಟ್ ಮಾಡಿದ್ದರು. ಅಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಕಾರ್ತಿಕ್ ಗೌಡ ಉತ್ತರಿಸಿದ್ದಾರೆ.

ಈ ಪ್ರಶ್ನೋತ್ತರದ ವೇಳೆ ‘ಕಾಂತಾರ ಚಿತ್ರದ ಒಂದು ಕ್ಲಿಪ್ ಆದ್ರೂ ಅಪ್ಪು ಸರ್ ನೋಡಿದ್ದರಾ’ ಎಂದು ಒಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ವೇಳೆ ಇಂಟ್ರೆಸ್ಟಿಂಗ್ ವಿಚಾರವನ್ನು ಕಾರ್ತಿಕ್ ಗೌಡ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ:‘ತ್ರಿಬಲ್ ರೈಡ್’ ಮಾಡಲು ಬಂದ ಗೋಲ್ಡನ್ ಸ್ಟಾರ್

‘ಯಾರಿಗೂ ತಿಳಿಯದ ವಿಚಾರವೊಂದಿದೆ. ಅಪ್ಪು ಸರ್ ಕಾಂತಾರ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಬೇಕಿತ್ತು. ಚಿತ್ರವನ್ನು ಒಂದು ನಿರ್ದಿಷ್ಟ ಅವಧಿಯಲ್ಲೇ ಚಿತ್ರೀಕರಣ ಮಾಡಬೇಕಿತ್ತು ಆದರೆ ಅಪ್ಪು ಸರ್‌ ಗೆ ಇದಕ್ಕೆ ಡೇಟ್ಸ್ ಕ್ಲ್ಯಾಶ್ ಆಗುತ್ತಿದ್ದ ಕಾರಣ ಅವರೇ ರಿಷಬ್ ಶೆಟ್ಟಿ ಅವರೇ ಲೀಡ್‌ ಪಾತ್ರದಲ್ಲಿ ನಟಿಸುವಂತೆ ಸಲಹೆ ಕೊಟ್ಟರು’ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.

Advertisement

ಈ ಚಿತ್ರದಲ್ಲಿ ಕಿಶೋರ್‌, ರಘು ಪಾಂಡೇಶ್ವರನ್‌, ಅಚ್ಯುತ್ ಕುಮಾರ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮಿನಾಡ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಪ್ತಮಿ ಗೌಡ ಈ ಚಿತ್ರದಲ್ಲಿ ನಾಯಕಿ. ಅಂದಹಾಗೆ, ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದೆ. ಅಜನೀಶ್ ಲೋಕನಾಥ್ ಸಂಗೀತವಿದೆ.

“ಕಾಂತಾರ’ ದಲ್ಲಿ ಕಂಬಳವೂ ಪ್ರಮುಖ ಆಕರ್ಷಣೆ. ಅದಕ್ಕಾಗಿ ಚಿತ್ರತಂಡ ಕಂಬಳ ಓಟವನ್ನು ಆಯೋಜಿಸಿ, ಆ ಮೂಲಕ ಚಿತ್ರೀಕರಿಸಿದೆ. ಜೊತೆಗೆ ಕಂಬಳ ಓಟದಲ್ಲಿ ಸ್ವತಃ ರಿಷಭ್‌ ಕಾಣಿಸಿಕೊಂಡಿದ್ದು, ಅದಕ್ಕಾಗಿ ವಾರಗಟ್ಟಲೇ ತರಬೇತಿ ಕೂಡಾ ಪಡೆದಿದ್ದಾರೆ. “ಕಂಬಳ ಓಡಿದ್ದು ಒಂದು ವಿಭಿನ್ನ ಅನುಭವ. ಸಿನಿಮಾಗೆ ಅವಶ್ಯಕತೆ ಇರುವಷ್ಟನ್ನು ಮಾತ್ರ ಮಾಡಿದೆ. ಇದರ ಜತೆಗೆ ಕರಾವಳಿ ಭಾಗದ ಹಳ್ಳಿ ಯುವಕ ಮತ್ತು ಕೋಣ ಓಡಿಸುವವನು ಹೇಗಿರುತ್ತಾನೋ ಎಂಬ ಲುಕ್‌ ಕೂಡಾ ಇಲ್ಲಿದೆ’ ಎನ್ನುವುದು ರಿಷಭ್‌ ಮಾತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next