Advertisement

ಬೆಲ್ ಬಾರಿಸುವ ಕಲಾವಿದನ ಅರ್ಧಕ್ಕೆ ನಿಂತ ಮನೆಗೆ ಸಹಾಯ ಹಸ್ತದ ಭರವಸೆ ನೀಡಿದ ಪುನೀತ್

03:56 PM Apr 13, 2021 | Team Udayavani |

ಬೆಂಗಳೂರು: ಯುವರತ್ನ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಾಲೇಜ್ ಬೆಲ್ ಬಾರಿಸುವ ವಯಸ್ಸಾದ ಅಜ್ಜನಿಗೆ ಚಿತ್ರನಟ ಅಪ್ಪು ಪ್ರೀತಿಯ ಅಪ್ಪುಗೆ ನೀಡುವ ದೃಶ್ಯ ಎಲ್ಲರ ಕಣ್ಣಾಲಿಗೆಗಳನ್ನು ತೇವಗೊಳಿಸುತ್ತವೆ. ಕೆಲವೇ ನಿಮಿಷದ ಆ ಭಾವನಾತ್ಮಕ ಸನ್ನಿವೇಶ ಸಿನಿಮಾ ಮುಗಿದ ಮೇಲೆಯೂ ನಮ್ಮನ್ನು ಕಾಡದೆ ಇರಲಾರದು.

Advertisement

ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ ‘ಯುವರತ್ನ’ ಚಿತ್ರದಲ್ಲಿ ಕಾಲೇಜಿನ ಗಂಟೆ ಬಾರಿಸುವವನ ಪಾತ್ರದಲ್ಲಿ ನಟಿಸಿರುವುದು ಎಂ.ಕೆ.ಮಠ. ಬಣ್ಣದ ಲೋಕ ನಂಬಿಕೊಂಡು ಬದುಕುತ್ತಿರುವ ಈ ಕಲಾವಿದನ ಬಗ್ಗೆ ಇತ್ತೀಚಿಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

ಯುವರತ್ನ ಸಿನಿಮಾದಲ್ಲಿ ಎಂ.ಕೆ.ಮಠ ಅವರಿಗೆ ಪುನೀತ್ ರಾಜಕುಮಾರ್ ತೋರಿದ ಪ್ರೀತಿ ನೀವು ನೋಡಿರಬಹುದು. ಅದು ಕೇವಲ ಬೆಳ್ಳಿ ಪರದೆ ಮೇಲಿನ ದೃಶ್ಯಕ್ಕಾಗಿ ಚಿತ್ರೀಸಿದ ಸನ್ನಿವೆಶವಾಗಿರಬಹುದು. ಆದರೆ, ದೊಡ್ಮನೆ ಕುವರ ಪುನೀತ್ ರಾಜಕುಮಾರ್ ಎಂ.ಕೆ. ಮಠ ಅವರಿಗೆ ನಿಜ ಜೀವನದಲ್ಲಿಯೂ ಅದೇ ಪ್ರೀತಿಯ ಹಾಗೂ ಭರವಸೆಯ ಅಪ್ಪುಗೆ ನೀಡಲು ಮುಂದಾಗಿದ್ದಾರೆ. ಅರ್ಥಾತ್ ಅರ್ಧಕ್ಕೆ ನಿಂತಿರುವ ಈ ಪುಟ್ಟ ಕಲಾವಿದನ ಕನಸಿನ ಮನೆ ಪೂರ್ಣಗೊಳ್ಳಲು ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದಾರಂತೆ.

‘ಯುವರತ್ನ’ ಚಿತ್ರದ ಶೂಟಿಂಗ್ ನಡುವಿನ ಬಿಡುವಿನಲ್ಲಿ ಪುನೀತ್ ಜತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು ಮಠ. ದೊಡ್ಡಮನೆಯ ಸರದಾರನಾಗಿರುವ ಅಪ್ಪು ಮನಸ್ಸು ಕೂಡಾ ದೊಡ್ಡದೇ. ತಕ್ಷಣವೇ ‘ತಥಾಸ್ತು’ ಅಂತ ಹೇಳಿದ್ದಾರೆ. ಮಠ ಅಪ್ಪುವಿನ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲೇ ಇವರ ಮನೆಗೊಂದು ಅಂತಿಮ ರೂಪ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next