Advertisement

ಹೊಸಪೇಟೆ: ಪುನೀತ್ ಪ್ರಥಮ ಪುಣ್ಯ ಸ್ಮರಣೆ: ಅಪ್ಪು ಅಭಿಮಾನಿಗಳಿಂದ ಅನ್ನಸಂತರ್ಪಣೆ

11:51 AM Oct 29, 2022 | Team Udayavani |

ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಶನಿವಾರ ನಗರದ ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಗೈದು, ಗೌರವ ಸಲ್ಲಿಸಿದರು.

Advertisement

ಹಂಪಿ ಭುವನೇಶ್ವರಿ ದೇವಿ ದೇವಾಲಯದಿಂದ ಕನ್ನಡ ಜ್ಯೋತಿ ಹೊತ್ತು ತಂದ ಅಭಿಮಾನಿಗಳು, ಪುನೀತ್ ಭಾವಚಿತ್ರ ಪ್ರದರ್ಶನ ಮಾಡುತ್ತಾ ಅಪ್ಪು ಪರ ಜಯಘೋಷ ಮೊಳಗಿಸಿದರು. ಪ್ರವಾಸೋದ್ಯಮ ಆನಂದ ಸಿಂಗ್ ಮತ್ತು ಅವರ ಪುತ್ರ ಸಿದ್ದಾರ್ಥ್ ಸಿಂಗ್ ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ, ನದಾಪ್/ಪಿಂಜಾರ್ ಸಮುದಾಯ ಮುಖಂಡರು ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಅನ್ನಸಂತರ್ಪಣೆ:

ನಟ ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ನಗರದ ಪುನೀತ್ ರಾಜಕುಮಾರ್ ವೃತ್ತ ಹಾಗೂ ಚಿತ್ತವಾಡ್ಗಿಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ.

Advertisement

ಪುನೀತ್ ಪುತ್ಥಳಿಗೆ ನಿತ್ಯ ಪೂಜೆ:

ನಗರದಲ್ಲಿ ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಅವರ ಅಭಿಮಾನಿಯೊಬ್ಬರು ನಿತ್ಯ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ನಿತ್ಯ ಮಾಲಾರ್ಪಣೆ ಮಾಡುವ ಅಪ್ಪು ಅಭಿಮಾನಿ ಉಮೇಶ್ ಒಂದು ದಿನವೂ ಬಿಡದೇ ಪೂಜೆ ನೇರವೇರಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಪ್ರತಿಮೆಯೊಂದಿಗೆ ಫೋಟೋ:

ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಪುನೀತ್ ರಾಜಕುಮಾರ್ ಪ್ರತಿಮೆ ವೀಕ್ಷಣೆಗೆ ನಿತ್ಯ ಸಹಸ್ರಾರು ಜನರು ಆಗಮಿಸುತ್ತಿದ್ದಾರೆ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರು, ಪುನೀತ್ ಪ್ರತಿಮೆಗೆ ಗೌರವ ಸಲ್ಲಿಸಿ, ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ.

ಸೈಕಲ್ ಕೊಡುಗೆ:

ನಟ ಪುನೀತ್ ಪ್ರಥಮ ವರ್ಷದ ಪುಣ್ಯಸ್ಮರಣೆ ನಿಮಿತ್ತ ಯುವ ಮುಖಂಡ ಸಿದ್ದಾರ್ಥ್ ಸಿಂಗ್, ಐದು ಬಡ ವಿದ್ಯಾರ್ಥಿನಿಯರಿಗೆ ಸೈಕಲ್ ಹಾಗೂ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next