Advertisement

“ತೂಗುದೀಪ ದರ್ಶನ’ಕ್ಕೆ ಪುನೀತ್‌ ಸಾಥ್‌

09:57 AM Mar 10, 2020 | Lakshmi GovindaRaj |

ತೂಗುದೀಪ ಫ್ಯಾಮಿಲಿ ಕುರಿತಾದ “ತೂಗುದೀಪ ದರ್ಶನ’ ಎಂಬ ಪುಸ್ತಕವೊಂದು ಸಿದ್ಧವಾಗಿದೆ. ಪತ್ರಕರ್ತ ವಿನಾಯಕರಾಮ್‌ ಕಲಗಾರು ಅವರು ಬರೆದಿರುವ ಈ ಪುಸ್ತಕದ ಮುಖಪುಟವನ್ನು ಇತ್ತೀಚೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರು ಬಿಡುಗಡೆ ಮಾಡಿ ಶುಭಕೋರಿದ್ದಾರೆ.

Advertisement

ಈ ಪುಸ್ತಕದಲ್ಲಿ ಮೀನಾ ತೂಗುದೀಪ ಅವರು ತಮ್ಮ ಕಲಾ ಕುಟುಂಬದ ಆರಂಭದ ದಿನಗಳಿಂದ ಹಿಡಿದು ಹಲವು ಅಪರೂಪದ ಹಾಗು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೂಗುದೀಪ ಶ್ರೀನಿವಾಸ್‌ ಅವರ ಕುರಿತಾದ ಅಪರೂಪದ ಘಟನೆಗಳು, ದರ್ಶನ್‌ ಅವರ ಸಿನಿಮಾ ಹಾದಿ, ಆ ಹಾದಿ ಯಲ್ಲಿ ಎದುರಾದ ಸವಾಲುಗಳು, ಸಮಸ್ಯೆಗಳು … ಹೀಗೆ ಹಲವು ಅಂಶಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಇದು ಮೊದಲ ವರ್ಶನ್‌ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಬೆನ್ನಿಗೆ ಮತ್ತೂಂದು ವರ್ಶನ್‌ ತರುವ ತಯಾರಿಯಲ್ಲಿದ್ದಾರೆ ಲೇಖಕ ವಿನಾಯಕರಾಮ್‌ ಕಲಗಾರು. ಅಂದಹಾಗೆ, ಈ ಪುಸ್ತಕ ಶ್ರೀನಿವಾಸ್‌ ಅವರ ಜೋಹಾರ್‌ ಪ್ರಕಾಶನದಿಂದ ಹೊರಬರುತ್ತಿರುವುದು ವಿಶೇಷ. ಈಗಾಗಲೇ ಸಾಕಷ್ಟು ಸಿನಿಮಾ ಗಣ್ಯರು, ನಟರು, ಪುಸ್ತಕ ಬಗ್ಗೆ ಮಾತನಾಡಿದ್ದು, ದರ್ಶನ್‌ ಅಭಿಮಾನಿಗಳಲ್ಲಿ ಪುಸ್ತಕ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

Advertisement

Udayavani is now on Telegram. Click here to join our channel and stay updated with the latest news.

Next