Advertisement

ಸಾಲ ನೀಡಿದ ಪ್ರಕರಣ: ಸಿಎಂಡಿ ಮರಾಠೆ ಅರೆಸ್ಟ್

06:00 AM Jun 21, 2018 | |

ಪುಣೆ/ಮುಂಬಯಿ: ಸಾಲ ನೀಡಿರುವ ಪ್ರಕರಣ ಸಂಬಂಧ ಬ್ಯಾಂಕ್‌ ಆಫ್ ಮಹಾರಾಷ್ಟ್ರದ ಸಿಎಂಡಿ ರವೀಂದ್ರ ಮರಾಠೆ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಗುಪ್ತಾ ಸಹಿತ ಆರು ಮಂದಿಯನ್ನು ಪುಣೆಯ ಪೊಲೀಸ್‌ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿ ಡಿ.ಎಸ್‌. ಕುಲಕರ್ಣಿ ಗ್ರೂಪ್‌ (ಡಿಎಸ್‌ಕೆ)ಗೆ ಅಕ್ರಮವಾಗಿ 3 ಸಾವಿರ ಕೋಟಿ ರೂ. ಸಾಲ ನೀಡಿಕೆ ಪ್ರಕರಣ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ. ಝೋನಲ್‌ ಮ್ಯಾನೇಜರ್‌ ನಿತ್ಯಾನಂದ ದೇಶಪಾಂಡೆ, ಬ್ಯಾಂಕ್‌ನ ಮಾಜಿ ಸಿಎಂಡಿ ಸುಶೀಲ್‌ ಮುನ್ನೋಟ್‌, ಲೆಕ್ಕಪತ್ರ ಪರಿಶೋಧಕ ಸುನಿಲ್‌ ದೇಶ ಪಾಂಡೆ, ಡಿಎಸ್‌ಕೆ ಗ್ರೂಪ್‌ನ ಎಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ರಾಜೀವ್‌ ನೆವಾಸ್ಕರ್‌ ಬಂಧಿತರು. ಬ್ಯಾಂಕ್‌ನ ಪ್ರಮುಖ ಅಧಿಕಾರಿಗಳು ಡಿಎಸ್‌ಕೆ ಗ್ರೂಪ್‌ನ ಅಧಿಕಾರಿ, ಸಿಬಂದಿ ವರ್ಗದ ಜತೆ ಶಾಮೀಲಾಗಿ ವಹಿವಾಟುಗಳ ದಾಖಲೆಗಳನ್ನು ತಿದ್ದಿ ಸಾಲ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅನಂತರ ಆ ಹಣವನ್ನು ಹಿಂಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿಯಲ್ಲೇ ಡಿಎಸ್‌ಕೆ ಗ್ರೂಪ್‌ನ ಡಿ.ಎಸ್‌.ಕುಲಕರ್ಣಿ ಹಾಗೂ ಅವರ ಪತ್ನಿ ಹೇಮಂತಿ ಅವರನ್ನು ಬಂಧಿಸಲಾಗಿತ್ತು.

ನಿಯಮ ಉಲ್ಲಂಘನೆ: ಪಿಎನ್‌ಬಿಗೆ 13,000 ಕೋ.ರೂ. ಮೌಲ್ಯದ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್‌ ನಡೆಸಿದ ಆಂತರಿಕ ತನಿಖಾ ವರದಿ ಬಹಿರಂಗವಾಗಿದೆ. ಅದರಲ್ಲಿ ಸ್ವರ್ಣೋದ್ಯಮಿಗಳಾದ ನೀರವ್‌ ಮೋದಿ, ಮೆಹೂಲ್‌ ಚೋಸ್ಕಿಗೆ ಮುಂಬಯಿನ ಬ್ರಾಡಿ ಹೌಸ್‌ನಲ್ಲಿರುವ ಶಾಖೆಯ ಅಧಿಕಾರಿಗಳೇ ಅಕ್ರಮಕ್ಕೆ ನೆರವಾಗಿದ್ದಾರೆ. ಅಲ್ಲಿಂದಲೇ ಡಿಜಿಎಂ ಆಗಿದ್ದ ಗೋಕುಲ್‌ನಾಥ ಶೆಟ್ಟಿ ವರ್ಷಗಳ ಕಾಲ ನಕಲಿ ಸಾಲ ಗ್ಯಾರಂಟಿಗಳನ್ನು ನೀಡುತ್ತಿದ್ದರು ಎಂದು ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next