Advertisement

ಪುಣೆ –ಮುಂಬಯಿ ರೈಲು ಮಾರ್ಗ ಆಗಸ್ಟ್ 16ರವರೆಗೆ ಬಂದ್

08:05 AM Aug 12, 2019 | Team Udayavani |

ಮುಂಬಯಿ: ದಕ್ಷಿಣ ರೈಲ್ವೇ ವ್ಯಾಪ್ತಿಗೆ ಬರುವ ಮುಂಬಯಿ ಹಾಗೂ ಪುಣೆ ವಿಭಾಗಗಳಲ್ಲಿ ಮತ್ತು ನೈಋತ್ಯ ರೈಲ್ವೇ ವಲಯದ ವ್ಯಾಪ್ತಿಯಲ್ಲಿ ಬರುವ ಮಿರಾಜ್ – ಲೋಂಡಾ ವಿಭಾಗಗಳಲ್ಲಿ ಬರುವ ರೈಲು ಮಾರ್ಗಗಳು ಸಾಗುವ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ನೆರೆ ನೀರು ತುಂಬಿಕೊಂಡಿರುವ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ಆಗಸ್ಟ್ 16ರವರೆಗೆ ರದ್ದುಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

Advertisement

ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್ ಪ್ರೆಸ್, ಇಂಟರ್ ಸಿಟಿ ಎಕ್ಸ್ ಪ್ರೆಸ್, ಸಿನ್ಹಾಗಢ್ ಎಕ್ಸ್ ಪ್ರೆಸ್, ಮಹಾಲಕ್ಷ್ಮೀ ಎಕ್ಸ್ ಪ್ರೆಸ್, ಕೊಯ್ನಾ ಎಕ್ಸ್ ಪ್ರೆಸ್, ಓಕಾ – ತಮಿಳುನಾಡು ಎಕ್ಸ್ ಪ್ರೆಸ್, ಬಿಕಾನೇರ್ ಯಶವಂತಪುರ ಎಕ್ಸ್ ಪ್ರೆಸ್ ಮತ್ತು ನಾಂದೇಡ್ ಪನ್ವೇಲ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆಗಸ್ಟ್ 16ರವರೆಗೆ ರದ್ದುಗೊಂಡಿದೆ.

ಒಂದುವೇಳೆ ಪ್ರವಾಹದ ಕಾರಣದಿಂದ ಯಾವುದಾದರೂ ರೈಲುಗಳು ಹಳಿಮಧ್ಯದಲ್ಲಿ ಸಿಲುಕಿಕೊಂಡಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಅನುಕೂಲವಾಗುವಂತೆ 10 ದೋಣಿಗಳನ್ನು ಖರೀದಿಸಲು ಕೇಂದ್ರ ರೈಲ್ವೇ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next