Advertisement

ಪುಣೆ ಬಂಟರ ಸಂಘದ ಯುವ ವಿಭಾಗ: ವೃದ್ಧಾಶ್ರಮಕ್ಕೆ ನೆರವು

04:12 PM Aug 17, 2017 | Team Udayavani |

ಪುಣೆ: ಪುಣೆ ಬಂಟರ ಸಂಘದ ಯುವ ವಿಭಾಗದ ಸದಸ್ಯರು ಆ. 13ರಂದು ನಿವಾರ ವೃದ್ಧಾಶ್ರಮಕ್ಕೆ ಭೇಟಿ ನೀಡಿ ದಿನನಿತ್ಯ ಬೇಕಾಗುವ ಆಹಾರ ತಿನಿಸುಗಳನ್ನು ನೀಡಿ, ದೀಪಾವಳಿಗೆ ಹಚ್ಚುವ ದೀಪಗಳಿಗೆ ಪೈಂಟಿಂಗ್‌  ಮಾಡಿ ಅವರೊಂದಿಗೆ ಕಾಲ ಕಳೆದರು.

Advertisement

ಈ ಸಂದರ್ಭ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಸಂಘದ ಸದಸ್ಯರಾದ ಪ್ರಶಾಂತ್‌ ಶೆಟ್ಟಿ  ಹೆರ್ಡೆಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿಶ್ವನಾಥ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌ ಜಯ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಉದಯ… ಜಯಕರ್‌ ಶೆಟ್ಟಿ, ಕಾರ್ಯದರ್ಶಿ ಸಿದ್ಧಾಂತ್‌ ಸುಧಾಕರ್‌ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. 

 ಚಿತ್ರ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next