Advertisement

ಆಕಸ್ಮಿಕ ಬೆಂಕಿಗೆ ಕುರಿ ಮೇಕೆಗಳ ಸಾವು ಎರಡು ಲಕ್ಷ ರೂಗಳ ಪರಿಹಾರ ನೀಡಲು ಮುಖ್ಯಮಂತ್ರಿಗಳ ಆದೇಶ

11:55 AM Mar 27, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಫುಲ್ಮಾಕಲ್ ಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಗಂಗಾಧರಪ್ಪ ಎಂಬವರಿಗೆ ಸೇರಿದ 51 ಕುರಿಮರಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಎರಡು ಲಕ್ಷ ರೂಗಳ ಪರಿಹಾರವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.

Advertisement

ಫುಲ್ಮಾಕಲ್ ಡಿ ಗ್ರಾಮದಲ್ಲಿ ಗಂಗಾಧರಪ್ಪ ಎಂಬವರಿಗೆ ಸೇರಿದ ದೊಡ್ಡಿಯಲ್ಲಿ 51 ಕುರಿ ಮತ್ತು ಮೇಕೆ ಆಕಸ್ಮಿಕ ಬೆಂಕಿಗಾಹುತಿಯಾಗಿದ್ದು ಇದರಿಂದ ಸುಮಾರು 4 ಲಕ್ಷ 8 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಿ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್ಎಚ್ ಶಿವಶಂಕರ್ ರೆಡ್ಡಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ನೇತ್ರಾವತಿ ಸೇತುವೆಯಲ್ಲಿ ಕಾರು- ರಿಕ್ಷಾ ಅಪಘಾತ: ರಿಕ್ಷಾ ಚಾಲಕ ದಾರುಣ ಸಾವು

ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೂಡಲೇ ವಯೋವೃದ್ಧ ದಂಪತಿಗಳಿಗೆ ಎರಡು ಲಕ್ಷ ರೂಗಳು ಪರಿಹಾರವನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ ಕುರಿ ಮತ್ತು ಮೇಕೆಗಳು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಗಂಗಾಧರಪ್ಪ ಅವರಿಗೆ ಮುಖ್ಯಮಂತ್ರಿಗಳು ಎರಡು ಲಕ್ಷ ರೂಗಳು ಪರಿಹಾರಧನವನ್ನು ಬಿಡುಗಡೆ ಮಾಡಲು ಆದೇಶಿಸಿದಕ್ಕೆ ಶಾಸಕ ಎನ್ಎಚ್ ಶಿವಶಂಕರ್ ರೆಡ್ಡಿ ಅವರು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next