Advertisement

Sullia ಕೊರಳಿನ ಚಿನ್ನದ ಸರ ಎಳೆದು ಪರಾರಿ

12:35 AM Jan 13, 2024 | Team Udayavani |

ಸುಳ್ಯ: ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಇಬ್ಬರು ಅಪರಿಚಿತರು ಪರಾರಿಯಾದ ಘಟನೆ ನಡೆದಿದೆ.

Advertisement

ಐವರ್ನಾಡು ನಿವಾಸಿ ಜಯಂತಿ ಸಿ. (50) ಅವರು ಪಾಂಬಾರಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು, ಜ.11ರಂದು ಮಧ್ಯಾಹ್ನ ಸ್ಕೂಟರ್‌ನಲ್ಲಿ ಇಬ್ಬರು ಅಪರಿಚಿತರು ಅಂಗಡಿ ಬಳಿಗೆ ಬಂದಿದ್ದು, ಈ ಪೈಕಿ ಓರ್ವ ಸಿಗರೇಟು ಕೇಳಿ 50 ರೂ. ನೀಡಿದ್ದು ಜಯಂತಿ ಅವರು ಸಿಗರೇಟ್‌ ಪ್ಯಾಕ್‌ ನೀಡಲು ತಯಾರಿಯಲ್ಲಿರುವಾಗ ಅಪರಿಚಿತ ಏಕಾಏಕಿ ಗೂಡಂಗಡಿಯ ಡ್ರಾಯರ್‌ಗೆ ಕೈ ಹಾಕಲು ಯತ್ನಿಸಿದಾಗ ಮಹಿಳೆ ಡ್ರಾಯರನ್ನು ದೂಡಿದ್ದು, ಆಗ ಅಪರಿಚಿತ ವ್ಯಕ್ತಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಳೆದೊಯ್ದು ಓಡಿ ಹೋಗಿದ್ದು, ಬಳಿಕ ಆತ ಬಂದಿದ್ದ ಸ್ಕೂಟರ್‌ನ ಹಿಂಬದಿ ಕುಳಿತು ಇಬ್ಬರೂ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ.

ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಸುಮಾರು 16 ಗ್ರಾಂ ತೂಕದ ñ80 ಸಾವಿರ ರೂ. ಮೌಲ್ಯದ ಚಿನ್ನದ ಸರ ಅಪರಿಚಿತರ ಪಾಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next