Advertisement

ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಸಾರ್ವಜನಿಕ ಅಭಿಯೋಜಕ

10:03 AM Aug 30, 2019 | Team Udayavani |

ಭದ್ರಾವತಿ : ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆಕೊಡಿಸಲು ತನ್ನ ಕಕ್ಷಿದಾರರಿಂದ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ.

Advertisement

ಭದ್ರಾವತಿ 4ನೇ ಅಡಿಷನಲ್ ಸೆಷನ್ಸ್ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕ ರವೀಂದ್ರ ಎಸಿಬಿ ಬಲೆಗೆ ಬಿದ್ದವರು.

ಭದ್ರಾವತಿಯ ನಿರಂಜನ್ ಕದಂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು ಸುನೀಲ್ ಗಾಯಕ್ ವಾಡ್ ಎಂಬುವರಿಂದ 50 ಸಾವಿರ ಲಂಚ ಕೇಳಿದ್ದ ಸಾರ್ವಜನಿಕ ಅಭಿಯೋಜಕ.

ಇಂದು ಭದ್ರಾವತಿಯ ತಮ್ಮ ಕಚೇರಿಯಲ್ಲಿ ಸುನೀಲ್ ಗಾಯಕ್ ವಾಡ್ ಅವರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಡಿವೈಎಸ್ ಪಿ ವೇಣುಗೋಪಾಲ್, ಇನ್ಸ್ ಪೆಕ್ಟರ್ ಗಳಾದ ವೀರೇಂದ್ರ, ತಿಪ್ಪೇಸ್ವಾಮಿ ನೇತೃತ್ವದ ತಂಡದಿಂದ ದಾಳಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next