Advertisement

ಬಸ್‌ ತಂಗುದಾಣ ಶಿಥಿಲ-ದುರಸ್ತಿಗೆ ಜನರ ಆಗ್ರಹ

02:56 PM Feb 20, 2022 | Team Udayavani |

ಮಾನ್ವಿ: ತಾಲೂಕಿನ ಜಾಗೀರ್‌ ಪನ್ನೂರ್‌ ಗ್ರಾಮದಲ್ಲಿನ ಬಸ್‌ ತಂಗುದಾಣ ಶಿಥಿಲಗೊಂಡಿದ್ದು, ಪ್ರಯಾಣಿಕರು ಆತಂಕ ಎದುರಿಸುವಂತಾಗಿದೆ.

Advertisement

ನಿತ್ಯ ಗ್ರಾಮದಿಂದ ವಿವಿಧ ಊರುಗಳಿಗೆ ಸಂಚರಿಸುವ ಜನರು ಬಸ್‌ಗಾಗಿ ತಂಗುದಾಣದಲ್ಲಿ ಕಾಯುವುದಕ್ಕೆ ಭಯ ಪಡುವಂತಾಗಿದೆ.

ಮಕ್ಕಳು, ವೃದ್ಧರು, ಮಹಿಳೆಯರು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ಬಸ್‌ ತಂಗುದಾಣದಲ್ಲಿ ಕುಳಿತುಕೊಳ್ಳಬೇಕಾಗಿದೆ. ಯಾವ ಸಮಯದಲ್ಲಿ ಬೇಕಾದರು ಛಾವಣಿ ಕುಸಿಯುವ ಭೀತಿ ಎದುರಾಗಿದೆ.

ಗ್ರಾಮದ ನಿವಾಸಿ ಸದಾನಂದ ಪನ್ನೂರು ಮಾತನಾಡಿ, ಕಳೆದ ಆರು ವರ್ಷಗಳಿಂದ ಬಸ್‌ ತಂಗುದಾಣ ಛಾವಣಿ ಬದಲಾಯಿಸಿ, ದುರಸ್ತಿ ಮಾಡುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು ಕ್ರಮ ಕೈಗೊಳ್ಳುತ್ತಿಲ್ಲ. ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಬಸ್‌ಗಾಗಿ ಕಾಯುವಂತೆ ಆಗಿದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next