Advertisement

ಸಾರ್ವಜನಿಕ ಅಹವಾಲು ಕೇಂದ್ರ

05:27 PM May 29, 2020 | Suhan S |

ಶಿರಸಿ: ಕೋವಿಡ್ ಹರಡುತ್ತಿರುವುದರಿಂದ ಪೊಲೀಸ್‌ ಸಿಬ್ಬಂದಿ ಆರೋಗ್ಯಕ್ಕೂ ರಕ್ಷಣೆ ಕೊಡಬೇಕಾಗಿದೆ. ಈ ಕಾರಣದಿಂದ ಕೋವಿಡ್ ಫ್ರಂಟ್‌ಲೈನ್‌ ಪೊಲೀಸ್‌ ಟೀಮ್‌ ರಚಿಸಲಾಗತ್ತಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜ್‌ ಹೇಳಿದರು.

Advertisement

ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಗುರುವಾರ ಅಹವಾಲು ಆಲಿಕಾ ಕೇಂದ್ರ ವೀಕ್ಷಿಸಿ ಮಾತನಾಡಿದರು. ಕ್ವಾರಂಟೈನ್‌ ಕೇಂದ್ರ ಸೇರಿದಂತೆ ಕೋವಿಡ್ ಕ್ಕೆ ಸಂಬಂಧ ಕಾರ್ಯಚಟುವಟಿಕೆ ಗಳಲ್ಲಿ ಕಾರ್ಯನಿರ್ವಹಿಸಲು ಕೋವಿಡ್ ಫ್ರಂಟ್ ಲೈನ್ ‌ ಪೊಲೀಸ್‌ ಟೀಮ್‌ ರಚಿಸಲಾಗುತ್ತಿದೆ. ತಲಾ ಹತ್ತು ಜನರ ಟೀಂ ಇದಾಗಿದ್ದು, ಹತ್ತನೇ ದಿನ ಕೋವಿಡ್ ವೈರಸ್‌ ತಪಾಸಣೆ ಕೂಡ ಮಾಡಲಾಗುತ್ತದೆ. ಹನ್ನೊಂದನೇ ದಿನ ಇನ್ನೊಂದು ಟೀಂ ಕೆಲಸ ಮಾಡುತ್ತದೆ. ಕೋವಿಡ್ ಕ್ವಾರಂಟೈನ್‌ ಕೇಂದ್ರ, ಹೊರ ರಾಜ್ಯದಿಂದ ಬಂದವರಿದ್ದಲ್ಲಿ ತೆರಳುವುದು, ಕರೆತರುವುದು ಮುಂತಾದ ಕಾರ್ಯಕ್ಕೆ ಪ್ರಂಟ್‌ಲೈನ್‌ ತಂಡ ಕೆಲಸ ಮಾಡಲಿದೆ. ಅಗತ್ಯ ಇದ್ದ ಪೊಲೀಸರಿಗೆ ಪಿಪಿಟಿ ಕಿಟ್‌ ನೀಡಲಾಗುತ್ತದೆ ಎಂದರು.

ಇಲ್ಲಿಯೂ ಸಾಮಾಜಿಕ ಅಂತರ ಪಾಲನೆ ಮಾಡಬೇಕಾಗುತ್ತದೆ. ಏಕೆಂದರೆ ಪೊಲೀಸರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಹೀಗಾಗಿ ಜನರ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಪೊಲೀಸ್‌ ಠಾಣೆಗಳ ಹೊರಗೆ ರಿಸೆಪ್ಶನ್‌ ಸೆಂಟರ್‌ ತೆರೆಯಲಾಗುತ್ತಿದೆ ಎಂದರು. ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next