Advertisement

ಮಂಗಳೂರು ಪಬ್‌ ದಾಳಿ: ಮುತಾಲಿಕ್‌ ಸೇರಿ ಆರೋಪಿಗಳೆಲ್ಲರೂ ಖುಲಾಸೆ 

05:08 PM Mar 12, 2018 | |

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ  ಪಬ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳನ್ನು ನಗರದ 3ನೇ ಜೆಎಂಎಫ್ಸಿ ನ್ಯಾಯಾಲಯ ಖುಲಾಸೆಗೊಳಿಸಿ ಸೋಮವಾರ ತೀರ್ಪು ನೀಡಿದೆ.

Advertisement

ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌,ಸುಭಾಷ್‌ ಪಡೀಲ್‌, ಪ್ರಸಾದ್‌ ಅತ್ತಾವರ  ಸೇರಿ 26 ಮಂದಿ ಆರೋಪಿಗಳನ್ನು ನ್ಯಾಯಾಲಯ ಸುಧೀರ್ಘ‌ ವಿಚಾರಣೆ ನಡೆಸಿದ ಬಳಿಕ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣಕ್ಕಾಗಿ ಆರೋಪ ಮುಕ್ತ ಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಆಶಾ ನಾಯಕ್‌ ಮತ್ತು ವಿನೋದ್‌ ಅವರು ವಾದ ಮಂಡಿಸಿದ್ದರು. 

ತೀರ್ಪು ಸಂತಸ ತಂದಿದೆ, ನ್ಯಾಯಕ್ಕೆ ಜಯವಾಗಿದೆ ಎಂದು ಪ್ರಮೋದ್‌ ಮುತಾಲಿಕ್‌ ಅವರು ಪ್ರತಿಕ್ರಿಯಿಸಿದ್ದಾರೆ. ತೀರ್ಪು ಪ್ರಕಟಿಸುವ ವೇಳೆ ಮುತಾಲಿಕ್‌ ಅವರು ಕೋರ್ಟ್‌ನಲ್ಲಿ ಹಾಜರಿದ್ದರು. 

2009 ರಲ್ಲಿ ಬಲ್ಮಠದ ಆಮ್ನೇಷಿಯಾ ಪಬ್‌ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿ ಅಲ್ಲಿದ್ದವರಿಗೆ ಥಳಿಸಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next