Advertisement

ಪಿಎಸ್ಐ ಪರೀಕ್ಷೆ ಅಕ್ರಮ: ಶಾಸಕ ಪ್ರಿಯಾಂಕ್ ಗೆ ಸಿಐಡಿಯಿಂದ ಎರಡನೇ ನೊಟೀಸ್

03:10 PM Apr 28, 2022 | Team Udayavani |

ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷೆಗೆ ಅಕ್ರಮ ಹಾಗೂ ಮುಂದೆ ನಡೆಯಬೇಕಿರುವ 404 ಪಿಎಸ್ಐ ನೇಮಕಾತಿಗೂ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರ ಮುಂಗಡ ಬುಕ್ಕಿಂಗ್ ಮಾಡುವ ಕುರಿತಾಗಿ ಆಡಿಯೋ ಬಿಡುಗಡೆ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ತಂಡ ಎರಡನೇ ಬಾರಿಗೆ ನೊಟೀಸ್ ಜಾರಿ ಮಾಡಿದೆ.

Advertisement

ಎರಡನೇ ಬಾರಿ ನೊಟೀಸ್ ಜಾರಿ ಮಾಡಿರುವುದನ್ನು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು ಗುರುವಾರ ನನಗೆ ಮತ್ತೆ ಎರಡನೇ ಬಾರಿ ನೊಟೀಸ್ ನೀಡಿದ್ದಾರೆ. ಬೆಂಗಳೂರಿನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಬಂದು ನೋಟಿಸ್ ನೀಡಿದ್ದಾರೆ ಎಂದರು.

ವಿಮಾನ ಮೂಲಕ ಕಲಬುರಗಿಗೆ ಆಗಮಿಸುತ್ತಿರುವಾಗ ಸಿಐಡಿಯಿಂದ ಫೋನ್ ಬಂದಿದೆ. ಆದರೆ ನಾನು ಸಿಐಡಿ ಅಧಿಕಾರಿಗಳ ಫೋನ್ ರಿಸೀವ್ ಮಾಡಲಿಲ್ಲ. ನಂತರ ನಮ್ಮ ಸಿಬ್ಬಂದಿಗಳಿಂದ ಮಾಹಿತಿ ಬಂದಿದೆ. ಸಿಐಡಿ ಅಧಿಕಾರಿಗಳು ಬಂದು ನೊಟೀಸ್ ನೀಡಿರುವ ಮಾಹಿತಿ ಸಿಕ್ಕಿದೆ. ತನಿಖೆಗೆ ಹಾಜರಾಗದಿದ್ದಕ್ಕೆ ಈಗ ನೊಟೀಸ್ ನೀಡಲಾಗಿದೆ.‌ ನೊಟೀಸ್ ನೀಡಿದಕ್ಕೆ ತನಿಖೆಗೆ ಹಾಜರಗಾಬೇಕೆಂದ ನಿಯಮವಿಲ್ಲ ಎಂದು ವಿವರಣೆ ನೀಡಿದರು.

ದಿವ್ಯಾ ಬಂಧನಕ್ಕೆ ಹಿಂದೇಟು ಏಕೆ?: ಪಿಎಸ್ಐ ಹಗರಣದಲ್ಲಿ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿಯನ್ನು ಮೂರು ವಾರಗಳಾಗುತ್ತಿದ್ದರೂ ಯಾಕೆ ಬಂಧನ ಮಾಡಿಲ್ಲ. ದಿವ್ಯಾರಲ್ಲಿ ಅಂತಹ ದಿವ್ಯ ಶಕ್ತಿ ಏನಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಹಲವರು ಸಿಐಡಿಗೆ ಪತ್ರ ಬರೆದಿದ್ದಾರೆ.‌ ಹಾಗಾದ್ರೆ ಪತ್ರ ಬರೆದವರನೆಲ್ಲ ಸಹ ಸಿಐಡಿ ವಿಚಾರಣೆಗೆ ಕರೆಯಬೇಕು. ಬಿಜೆಪಿ ಸರ್ಕಾರದ ಪ್ರತಿಯೊಬ್ಬರದು ಹಗರಣದಲ್ಲಿ ಪಾಲುದಾರಿಕೆಯಿದೆ. ದೊಡ್ಡ ದೊಡ್ಡವರಿಗೆ ಹಗರಣದಲ್ಲಿ ಹಣ ಹೋಗಿದೆ.  ತಮ್ಮ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.

Advertisement

ಇದನ್ನೂ ಓದಿ:ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ : ಸಚಿವ ಮುರುಗೇಶ್ ನಿರಾಣಿ

ತನಿಖೆಗೆ ಹಾಜರಾಗಲು ನನಗೆ ಯಾವುದೇ ಭಯವಿಲ್ಲ. ಪ್ರಿಯಾಂಕ್ ತನಿಖೆಗೆ ಹಾಜರಾದರೆ ಲಾಕ್ ಆಗ್ತಾರೆಂದುಕೊಂಡರೆ ನಗೆಪಾಟಿಲಾಗಿದೆ. ತಾವು ಲಾಕ್ ಆಗುವುದಿಲ್ಲ. ನಾನು ಯಾವಗಲೂ ಅನ್‌ಲಾಕ್ ಆಗಿಯೇ ಇರುತ್ತೇನೆ. ಪಾರದರ್ಶಕ ತನಿಖೆಗೆ ಆಗ್ರಹಿಸುವುದು ತಪ್ಪಾ? ಮಾಧ್ಯಮಗಳು ಸಹ ಮೂಲಗಳ ಆಧರಿಸಿ ಮೂಲಕ ಸುದ್ದಿ ಬಿತ್ತರಿಸುತ್ತಿವೆ. ಹಾಗಾದ್ರೆ ಪ್ರಕರಣದಲ್ಲಿ ಮಾಧ್ಯಮಗಳನ್ನು ಸಹ ವಿಚಾರಣೆ ನಡೆಸುತ್ತಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.

ದಿವ್ಯಾ ಹಾಗರಗಿ ಎಲ್ಲಿಯೂ ಹೋಗಿಲ್ಲ. ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೆ ಇದ್ದಾರೆ. ರಕ್ಷಣೆಗಾಗಿ ಹಲವು ಶಾಸಕರು-ಸಚಿವರ ಮೊರೆ ಹೋಗುತ್ತಿದ್ದಾರೆ. ಒಟ್ಟಾರೆ ಪ್ರಕರಣ ಹಾದಿ ತಪ್ಪಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯ ಇಂಜನೀಯರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ನೀರಾವರಿ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ನಾಪತ್ತೆಯಾಗಿರುವುದನ್ನು ಸಹ ಅಧಿಕಾರಿಗಳು ಪತ್ತೆ ಮಾಡುತ್ತಿಲ್ಲ. ಲೋಕೋಪಯೋಗಿಯಲ್ಲದೇ ಇತರ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿವೆ. ಬಿಜೆಪಿ ಸರ್ಕಾರಗಳ ಹಗರಣಗಳ ತನಿಖೆ ನಡೆಸಲು ಪ್ರತ್ಯೇಕ ಕೋರ್ಟ್ ತೆರೆಯಬೇಕಾಗಿದೆ ಎಂದು ಖರ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next