Advertisement

‘ಪದವಿ ಪೂರ್ವ’ ನಂಬಿದ ಪೃಥ್ವಿ

04:02 PM Dec 29, 2022 | Team Udayavani |

ಕೆಲವು ಕಥೆಗಳು ಯಾವತ್ತಿದ್ದರೂ ಹಳೆಯದಾಗಲ್ಲ, ಅದನ್ನು ಹೇಗೆ ಬೇಕಾದರೂ ತೋರಿಸಬಹುದು. ಅದರಲ್ಲೊಂದು ಹರೆಯದ ಪ್ರೇಮಕಥೆ, ಲವ್‌ ಸ್ಟೋರಿಗಳು. ಕನ್ನಡ ಚಿತ್ರರಂಗದಲ್ಲಿ ಹದಿಹರೆಯದ ಲವ್‌ ಸ್ಟೋರಿಗಳು ಸಾಕಷ್ಟು ಬಂದಿವೆ. ಅನೇಕ ಚಿತ್ರಗಳು ಹೊಸಬರ ಮನಸ್ಸು ಗೆದ್ದಿವೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ “ಪದವಿ ಪೂರ್ವ’.

Advertisement

ವರ್ಷಾಂತ್ಯದಲ್ಲಿ ತೆರೆಕಾಣುತ್ತಿರುವ ಈ ಚಿತ್ರ ಈಗ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸ ಚಿತ್ರತಂಡಕ್ಕಿದೆ. ಪಕ್ಕಾ ಯೂತ್‌ಫ‌ುಲ್‌ ಕಥೆ ಹೊಂದಿರುವ ಕಾಲೇಜು ಹಿನ್ನೆಲೆಯಲ್ಲಿ ನಡೆಯುವ “ಪದವಿ ಪೂರ್ವ’ ಹೊಸಬರ ಚಿತ್ರವಾದರೂ ಒಂದೊಳ್ಳೆ ಮನರಂಜನೆಯ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆಯಲಿದೆ.

“ಪದವಿ ಪೂರ್ವ’ ಚಿತ್ರದಲ್ಲಿ ನಾಯಕರಾಗಿ ನಟಿಸುವ ಮೂಲಕ ಪೃಥ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಭವಿಷ್ಯದ ಭರವಸೆಯ ನಟರಾಗಿ ಹೊರಹೊಮ್ಮಿರುವ ಪೃಥ್ವಿಗೆ ಈಗ ಕನ್ನಡ ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಹುಡುಕಿಬರುತ್ತಿವೆ. ಯೋಗರಾಜ್‌ ಸಿನಿಮಾಸ್‌ ಹಾಗೂ ರವಿ ಶಾಮನೂರ್‌ ಫಿಲಂಸ್‌ ಜಂಟಿಯಾಗಿ “ಪದವಿ ಪೂರ್ವ’ ಚಿತ್ರವನ್ನು ನಿರ್ಮಿಸುತ್ತಿದೆ.

ಚಿತ್ರದ ಬಗ್ಗೆ ಮಾತನಾಡುವ ನಾಯಕ ಪೃಥ್ವಿ, “ಚಿತ್ರದ ಪ್ರಮೋಶನ್‌ ಅನ್ನು ಬೇರೆ ಬೇರೆ ಊರುಗಳಲ್ಲಿ ಮಾಡಿ ಬಂದಿದ್ದೇವೆ. ನಾವು ಹೊಸಬರಾದರೂ ನಮ್ಮ ಸಿನಿಮಾ ಬಗ್ಗೆ ಜನರಿಗೆ ಗೊತ್ತಿದೆ. ಇದು ಖುಷಿಯ ವಿಚಾರ. ಕಾಲೇಜು ದಿನಗಳ ಕಥೆ ಹೊಂದಿರುವ ಈ ಚಿತ್ರ ಇಂದಿನ ಟ್ರೆಂಡ್‌ಗೆ ಹೊಂದುತ್ತದೆ. ಯೋಗರಾಜ್‌ ಭಟ್‌ ಅವರು ನಮ್ಮಂತಹ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ’ ಎಂದರು.

ಹರಿಪ್ರಸಾದ್‌ ಜಯಣ್ಣ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಅಂಜಲಿ ಹಾಗೂ ಯಶಾ ನಾಯಕಿಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next