Advertisement

ಸಮಯಪ್ರಜ್ಞೆಯಿಂದ ಬಚಾವಾದ ಪ್ರವಾಸಿಗರು

03:05 AM Oct 03, 2018 | Karthik A |

ಸೇಲಂ: ತಮಿಳುನಾಡಿನ ಸೇಲಂನಲ್ಲಿರುವ ಅನೈವರಿ ಜಲಪಾತಕ್ಕೆ ಪಿಕ್‌ನಿಕ್‌ಗೆ ತೆರಳಿದ್ದ ಸುಮಾರು 200 ಮಂದಿ ಪ್ರವಾಸಿಗರು ಸಮಯಪ್ರಜ್ಞೆಯಿಂದಾಗಿ ಪ್ರವಾಹದಿಂದ ಬಚಾವಾಗಿದ್ದಾರೆ.

Advertisement

ನೀರಿನ ರಭಸ ಹೆಚ್ಚುತ್ತಿದ್ದಂತೆಯೇ ಮಾನವ ಸರಪಣಿ ರಚಿಸಿ ಎಲ್ಲರೂ ಬಚಾವಾಗಿದ್ದಾರೆ. ಈ ಪೈಕಿ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಜಾದಿನವಾಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಹಠಾತ್ತನೆ ನೀರು ಏರಿ ಮಂಡಿಯೆತ್ತರಕ್ಕೆ ಬರುತ್ತಿದ್ದಂತೆಯೇ ಭೀತಿಯಿಂದ ಕೂಗಿಕೊಂಡರು. ಆದರೆ ಈ ಪೈಕಿ ಕೆಲವರ ಮುಂಜಾಗ್ರತೆಯಿಂದ ಎಲ್ಲರೂ ಕೈ ಕೈ ಹಿಡಿದುಕೊಂಡು ನೀರಿನ ರಭಸಕ್ಕೆ ಕೊಚ್ಚಿಹೋಗದಂತೆ ರಕ್ಷಿಸಿಕೊಂಡರು. ಇನ್ನು ಕೆಲವರು ಬಳಿಯಿದ್ದ ಬಂಡೆಯನ್ನು ಅಪ್ಪಿ ಹಿಡಿದು ರಕ್ಷಣೆ ಪಡೆದರು. ನೀರಿನ ಪ್ರಮಾಣ ಇಳಿದ ಅನಂತರ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next