Advertisement

ಬೈಕ್‌ ಸವಾರರಿಗೆ ಊಟ ಕೊಟ್ಟು ಬುದ್ಧಿವಾದ

06:40 PM May 13, 2021 | Team Udayavani |

ಮಧುಗಿರಿ: ಲಾಕ್‌ಡೌನ್‌ನಿಂದಾಗಿ ಬೈಕ್‌ಗಳಿಗೆ ಕಡಿವಾಣ ಹಾಕಲು ಪೊಲೀಸರು ಲಾಠಿ ಬೀಸುವುದು, ದಂಡ ವಿಧಿಸುವುದು ಸಾಮಾನ್ಯ. ಆದರೆ, ಮಧುಗಿರಿ ಡಿವೈಎಸ್ಪಿ ನಿಯಮ ಮೀರಿದ ಬೈಕ್‌ ಸವಾರರಿಗೆ ಊಟ ಕೊಟ್ಟು ಸತ್ಕರಿಸಿದ ಘಟನೆ ನಡೆದಿದೆ.

Advertisement

ಮಧುಗಿರಿಯ ಡಿವೈಎಸ್ಪಿ ಕೆ.ಜೆ.ರಾಮಕೃಷ್ಣಪ್ಪ ಅವರು ಮಧುಗಿರಿ ಉಪ ವಿಭಾಗದಲ್ಲಿ 66 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು. ನಂತರ ವಾಹನ ಬಿಡಿಸಿಕೊಡುವಂತೆ ಪ್ರಭಾವಿಗಳಿಂದ ಒತ್ತಡ ಬರಲು ಆರಂಭವಾಗಿತ್ತು. ಆದರೆ, ಬುಧವಾರ ಕಠಿಣ ನೀತಿಗೆ ಕೊಂಚ ಸಡಿಲಿಕೆ ನೀಡಿದ್ದು, ಸಂಚಾರ ನಿಯಮ ಪಾಲಿಸದ ಬೈಕ್‌ ಸವಾರರನ್ನು ಠಾಣೆಗೆ ಕರೆತಂದು ಊಟ ನೀಡುತ್ತಿದ್ದಾರೆ.

ಈ ಕ್ರಮಕ್ಕೆ ಸಾರ್ವಜನಿಕರು ಸಂಕೋಚದಿಂದಲೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ, ಬೈಕ್‌ ಸವಾರರನ್ನು ವಾಹನ ಸಮೇತ ವಶಕ್ಕೆ ಪಡೆದ ಡಿವೈಎಸ್ಪಿ ದಂಡ ಹಾಕದೆ ಠಾಣೆ ಆವರಣದಲ್ಲೇ ಕೂರಿಸಿದ್ದಾರೆ. ಮಧ್ಯಾಹ್ನದ ಊಟವನ್ನು ಅವರೇ ವ್ಯವಸ್ಥೆ ಮಾಡಿದ್ದು, ಸಂಜೆಯ ನಂತರ ಮನೆಗೆ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next