Advertisement
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಪಾಂಜ್ ಐರನ್ ಹಾಗೂ ಜಿಂದಾಲ್ ಕಾರ್ಖಾನೆಗಳು ತಮ್ಮ ಸರಕನ್ನು ಸಾಗಿಸಲು ಸ್ಥಳೀಯ ಲಾರಿಗಳಿಗೆ ಅವಕಾಶ ನೀಡದೆ ಹೊರ ರಾಜ್ಯದ ಲಾರಿಗಳಿಗೆ ಮಣೆ ಹಾಕುತ್ತಿವೆ. ಇದರಿಂದ ಸ್ಥಳೀಯ ಲಾರಿ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಮೊದಲು ಸ್ಥಳೀಯ ಲಾರಿಗಳಿಗೆ ತಿಂಗಳಿಗೆ 10 ಲೋಡ್ ಸರಕು ಸಾಗಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ತಿಂಗಳಿಗೆ 3 ರಿಂದ 4 ಲೋಡ್ ಮಾತ್ರ ಸಾಗಿಸಲಾಗುತ್ತಿದೆ. ಇದರಿಂದ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗವನ್ನು ನಂಬಿ ಫೈನಾನ್ಸನಲ್ಲಿ ಲಾರಿ ಖರೀದಿಸಿದ ಮಾಲೀಕರು ಈಗ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ನ.19ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಹ ಗಮನಕ್ಕೆ ತಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲೆಯ ಕಾರ್ಖಾನೆಗಳು ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು. ಲಾರಿ ಬಾಡಿಗೆ ವಿಷಯದಲ್ಲಿ ತಾರತಮ್ಯವಿಲ್ಲದೆ ನಿತ್ಯ ಡಿಸೇಲ್ ಬೆಲೆಗೆ ತಕ್ಕಂತೆ ಬಾಡಿಗೆ ನಿಗದಿಪಡಿಸಬೇಕು.
Related Articles
Advertisement